Webdunia - Bharat's app for daily news and videos

Install App

ಭೂಗಳ್ಳರ ಕಾಟಕ್ಕೆ ಅನ್ನದಾತರು ಕಂಗಾಲು

Webdunia
ಶುಕ್ರವಾರ, 14 ಜುಲೈ 2023 (20:20 IST)
ಭೂ ಕಬಳಿಕೆದಾರರ ಕಾಟದಿಂದ ರೈತನೋರ್ವ ಆತ್ಮಹತ್ಯೆಗೆ ನಿರ್ಧಾರ ಕೈಗೊಂಡಿದ್ದಾರೆ. ಆನೇಕಲ್​​ನ ಮುಗುಳೂರು ನಿವಾಸಿ ಬಾಲಕೃಷ್ಣ ಆತ್ಮಹತ್ಯೆ ನಿರ್ಧಾರ‌ ಮಾಡಿರುವ ರೈತ. ಮುಗುಳೂರಿನಲ್ಲಿರುವ ಬಾಲಕೃಷ್ಣನ ಒಂದು ಎಕರೆ 28 ಗುಂಟೆ ಜಮೀನಿನ ಮೇಲೆ ಖದೀಮರು ಕಣ್ಣಿಟ್ಟಿದ್ದಾರೆ.. ಖದೀಮರು ಕಳೆದ ವರ್ಷ ನಕಲಿ ಸೈನ್ ಬಳಸಿ ಭೂಮಿಯನ್ನು‌ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದನ್ನರಿತ ಬಾಲಕೃಷ್ಣ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿಸಿದ್ದ. ಇದಕ್ಕೆ ಕಿಡಿಗೇಡಿಗಳು ಬಾಲಕೃಷ್ಣನಿಗೆ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬಾಲಕೃಷ್ಣ ಆನೇಕಲ್​ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.. ನಂತರ ಬಾಲಕೃಷ್ಣ ಎಸ್​ಪಿ ಬಳಿ ತಮ್ಮ ಅಳಲನ್ನು ತೋಡಿಕೊಂಡಾಗ ಪೊಲೀಸರು ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ. ಮುಗುಳೂರಿನ ಶ್ರೀ ರಾಮಯ್ಯ, ಮುನಿರಾಜು ಹಾಗು ಆಲ್ಬರ್ ಅಭೀತ್‌ ಮೇಲೆ FIR ದಾಖಲಿಸಿದ್ದಾರೆ.. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತ ಬಾಲಕೃಷ್ಣ ಆಗ್ರಹಿಸಿದ್ದಾನೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments