Select Your Language

Notifications

webdunia
webdunia
webdunia
webdunia

ಕನ್ನಡಿಗ ಶ್ರೀಕಾಂತ್ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ

ಕನ್ನಡಿಗ ಶ್ರೀಕಾಂತ್ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ
ಬೆಂಗಳೂರು , ಬುಧವಾರ, 2 ಮಾರ್ಚ್ 2022 (14:44 IST)
ಕ್ಷಣ ಕ್ಷಣಕ್ಕೂ ಉಕ್ರೇನ್ ಪರಿಸ್ಥಿತಿ ವಿಷಮವಾಗುತ್ತಿದ್ದು, ಬಂಕರ್ ಗಳಲ್ಲಿ ರಕ್ಷಣೆ ಪಡೆದಿರುವ ಕನ್ನಡಿಗರಲ್ಲಿ ಆತಂಕ ಹೆಚ್ಚಾಗು ತ್ತಿದೆ. ಸದ್ಯದ ಉಕ್ರೇನ್ ಚಿತ್ರಣವನ್ನು ಮೃತ ನವೀನ್ ರೂಮ್ ಮೇಟ್, ಬೆಂಗಳೂರು ಮೂಲದ ಶ್ರೀಕಾಂತ್ ತೆರೆದಿಟ್ಟಿದ್ದಾರೆ.
ಗೆಳೆಯ ನವೀನ್ ಸಾವಿನ ಬಳಿಕ ಎಲ್ಲರೂ ಧೈರ್ಯ ಕಳೆದುಕೊಂಡಿದ್ದಾರೆ. ಯುದ್ಧ ಆರಂಭದಲ್ಲಿದ್ದ ಧೈರ್ಯ ಈಗ ಇಲ್ಲದಂತಾಗಿದೆ. ಸಂಚಾರಕ್ಕಿದ್ದ ಎಲ್ಲಾ ಮಾರ್ಗಗಳು ಕ್ಲೋಸ್ ಆಗ್ತಿವೆ. ಪಕ್ಕದಲ್ಲೇ ಸಿಡಿಯುತ್ತಿರುವ ಶೆಲ್ ದಾಳಿಗೆ ಜನರು ತತ್ತರಿಸುತ್ತಿದ್ದಾರೆ. ಅನ್ನ ಆಹಾರಕ್ಕೂ ನರಕಯಾತನೆ ಶುರುವಾಗಿದೆ. ಭಾರತಕ್ಕೆ ಬರುವ ಆಸೆ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ ಎಂದು ಕುಟುಂಬದವರಿಗೆ ಶ್ರೀಕಾಂತ್ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಶ್ರೀಕಾಂತ್ ರಕ್ಷಣೆಗೆ ಕುಟುಂಬದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಮರಳಿ ವಾಪಸ್ ಕರೆತರುವಂತೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ್ ರೆಡ್ಡಿ ಮಗ ಹೀರೋ ,ಬಾಹುಬಲಿ ಡೈರೆಕ್ಟರ್ ಆಕ್ಷನ್ ಕಟ್