ನಕಲಿ ಪಾಸ್ ಪೋರ್ಟ್ ಕಳ್ಳರು ಅಂದರ್

Webdunia
ಗುರುವಾರ, 10 ನವೆಂಬರ್ 2022 (21:08 IST)
ನಕಲಿ ದಾಖಲೆಗಳ ಮೂಲಕ ಅಸಲಿ ಪಾಸ್ ಫೋರ್ಟ್ ಮಾಡುತ್ತಿದ್ದ ಪ್ರಕರಣ ತನಿಖೆ ವೇಳೆ ಅಸಲಿ ಸತ್ಯ ಹೊರ ಬಿದ್ದಿದೆ. ವಿದೇಶಿಯರು ಹಾಗೂ ಕ್ರಿಮಿನಲ್ ಹಿನ್ನಲೆ ಇರುವವರೆ ಟಾರ್ಗೆಟ್ ಮಾಡ್ತಿದ್ದ ನಕಲಿ ಶೂರರು ಮುಖ್ಯವಾಗಿ ಶ್ರೀಲಂಕಾದವರನ್ನೆ ಟಾರ್ಗೆಟ್ ಮಾಡಿ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ರು.ಶ್ರೀಲಂಕ ಆರ್ಥಿಕವಾಗಿ ದಿವಾಳಿ ಆದ್ಮೇಲೆ ಬೇರೆ ಯಾವ ದೇಶಗಳಿಗೂ ಎಂಟ್ರಿ ಇಲ್ಲ. ಇದೆ ಕಾರಣಕ್ಕೆ ಇವರನ್ನ ಇಂಡಿಯಾಗೆ ಕರೆಸಿಕೊಂಡು ನಕಲಿ ಪಾಸ್ ಪೋರ್ಟ್ ಮಾಡಿ ಭಾರತೀಯರೆಂದು ವಿದೇಶಗಳಿಗೆ ಕಳುಹಿಸುವ ವ್ಗವಸ್ಥಿತ ಜಾಲ ಇದಾಗಿದೆ.
ಶ್ರೀಲಂಕಾದವರನ್ನೆ ಟಾರ್ಗೆಟ್ ಮಾಡ್ತಿದ್ದ ಬ್ರೋಕರ್ ಅಮೀನ್ ಸೇಠ್ ಅಬುದಾಬಿಯ ಕಿಂಗ್ ಪಿನ್ ಹೇಳಿದವರಿಗೆ ದಾಖಲಾತಿ ಸೃಷ್ಟಿಮಾಡ್ತಿದ್ದ. ಪೊಲೀಸ್ರು ಕೂಡ ನಕಲಿ ದಾಖಲಾತಿ ನೋಡಿ ಅಪ್ರುವಲ್ ಮಾಡ್ತಿದ್ರು. 
 
ಇನ್ನೂ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ ಮನೆ ಬಳಿ ಬಂದಾಗ ಪೊಲೀಸ್ರಿಗೆ ಇದೆ ನಮ್ಮ ಮನೆ ಎಂದು ನಂಬಿಸುತ್ತಿದ್ರು. ಇದನ್ನ ನಂಬಿ ಪೊಲೀಸ್ರು ನಂಬಿ ವೆರಿಫಿಕೇಷನ್ ಅಫ್ರೂ ಮಾಡ್ತಿದ್ರು. ಇನ್ನೂ ಈ ನಕಲಿ ದಾಖಲೇ ಸೃಷ್ಟಿಸಲು ಅಮೀನ್ ಸೇಠ್ ಗೆ ಇನ್ನೋರ್ವ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್ ಸಾಥ್ ನೀಡಿದ್ದ.ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡಿದ್ದ ಸಾಫ್ಟ್ ವೇರ್ ಇಂಜಿನಿಯರ್ ಪೋಟೋ ಮತ್ತು ಡ್ಯಾಕ್ಯುಮೆಂಟ್ಸ್ ಎಡಿಟಗ ಮಾಡಿ  ಫೇಕ್ ಮಾಡೋ ಕೆಲಸ ಮಾಡ್ತಿದ್ದ.
 
ಈ ಪ್ರಕರಣ ಬೆಳಕಿಗೆ ಬಂದಿದ್ದೆ ರೋಚಕವಾಗಿದ್ದು  ಮೈಸೂರಿನ ಪೆನ್ಷನ್ ಮೊಹಲ್ಲ ಪೊಲೀಸ್ರು ನಟೋರಿಯಸ್ ಕಳ್ಳನ ಬೆನ್ನು ಬಿದ್ದಿದ್ರು. ಈ ವೇಳೆ ಅತನ ಪಾಸ್ ಪೋರ್ಟ್ ಪತ್ತೆಯಾಗಿತ್ತು.ಅದರಲ್ಲಿ ಸಾದಿಕ್ ಪಾಷಾ ಬಸವನಗುಡಿ ಎಂಬ ವಿಳಾಸ ನೋಡಿ ವಿಚಾರಣೆ ನಡೆಸಿದಾಗ ಈ ರೀತಿಯವರು ಯಾರು ಇಲ್ಲ ಎನ್ನೋದು ಪತ್ತೆಯಾಗಿತ್ತು,
ಪೋಟೋ ಮಾತ್ರ ನಟೋರಿಯಸ್ ಕಳ್ಳ ಕರೀಂದು ಅನ್ನೋದು ಬಯಲಿಗೆ ಬಂದಾಗ ಬಸವನಗುಡಿ ಪೊಲೀಸ್ರು ಅಲರ್ಟ್ ಆಗಿ ಫೀಲ್ಡಿಗಿಳಿದಾಗ ಅಸಲಿ ಪ್ರಕರಣ ಆಳ ಅಗಲ ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಈ ತಿಂಗಳೊಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಪಕ್ಕಾ: ಗೋವಿಂದ ಕಾರಜೋಳ

ಸೂರಜ್​ ರೇವಣ್ಣಗೆ ಮತ್ತೆ ಸಂಕಷ್ಟ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಬಿ ರಿಪೋರ್ಟ್‌ ತಿರಸ್ಕರಿಸಿದ ಕೋರ್ಟ್‌

ಮುಂದಿನ ಸುದ್ದಿ
Show comments