Publish Date: Wed, 15 Jul 2020 (14:56 IST)
Updated Date: Wed, 15 Jul 2020 (14:58 IST)
ಭಾರತೀಯ ಸೇನೆಯ ಅಧಿಕಾರಿಗಳ ಪಾಲಿಗೆ ಫೇಸ್ ಬುಕ್ ಇನ್ನು ನೆನಪು ಮಾತ್ರ.
ದೇಶದ ಭದ್ರತೆಗೆ ಸಂಬಂಧಿಸಿದ ಕಾರಣದಿಂದಾಗಿ ಫೇಸ್ ಬುಕ್ ನಿಂದ ಹೊರಗೆ ಬರಬೇಕು ಎಂದು ದೆಹಲಿ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ಬಳಕೆ ಮಾಡದಂತೆ ನಿರ್ಬಂಧ ಹೇರಿದೆ.
ಇದಕ್ಕೆ ತಡೆ ಕೊಡಬೇಕೆಂದು ಲೆಫ್ಟಿನೆಂಟ್ ಕರ್ನಲ್ ಚೌಧರಿ ಎಂಬುವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ದ್ವಿಸದಸ್ಯ ಪೀಠವು ಮಧ್ಯಂತರ ತಡೆಗೆ ನಿರಾಕರಿಸಿದ್ದು, ಫೇಸ್ ಬುಕ್ ನಿಂದ ಹೊರಬರುವಂತೆ ಸೂಚನೆ ಕೊಟ್ಟಿದೆ.