Publish Date: Sat, 03 Jul 2021 (18:40 IST)
Updated Date: Sat, 03 Jul 2021 (18:45 IST)
ಬೆಂಗಳೂರು: ಪರೀಕ್ಷೆ ವಿನಾಯ್ತಿ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫಿಕ್ಸ್ ಆಗುವುದು ಬಹುತೇಕ ಖಚಿತವಾಗಿದೆ. ಪರೀಕ್ಷೆ ಕ್ಯಾನ್ಸಲ್ ಮಾಡಲು ಸಾಧ್ಯವೇ ಇಲ್ಲ
ಸೆಮಿಸ್ಟರ್ ಪರೀಕ್ಷೆಗಳನ್ನ ಕೈಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. ಎರಡೂ ಪರೀಕ್ಷೆಗಳ ನಡೆಸುತ್ತೇವೆ, ಪರೀಕ್ಷೆಗೆ ಹೆಚ್ಚು ದಿನಗಳ ಅಂತರವಿರುತ್ತೆ. 30 ರಿಂದ 45 ದಿನಗಳ ನಂತರ ಪರೀಕ್ಷೆ ನಡೆಸುತ್ತೇವೆ ಎಂದು ಪರೀಕ್ಷೆಗೆ ಬೇಕಾದ ತಯಾರಿಗಳನ್ನ ವಿಶ್ವವಿದ್ಯಾಲಯಗಳು ಮಾಡಿಕೊಳ್ಳುತ್ತಿವೆ.
ಬೆಂಗಳೂರು ಸೆಂಟ್ರಲ್ ವಿವಿ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ವಿವಿಗಳು ಪರೀಕ್ಷೆಗೆ ಸಿದ್ದತೆ ನೆಡೆಸುತ್ತಿವೆ.
ಜುಲೈ 7ರೊಳಗೆ ವ್ಯಾಕ್ಸಿನ್ ಕ್ಯಾಂಪೇನ್ ಮುಗಿಸುವಂತೆ ಡಿಸಿಎಂ ಸೂಚನೆ ಈಗಾಗಲೇ ನೀಡಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಅಶ್ವಥ ನಾರಾಯಣ್ ಸ್ಪಷ್ಟ ನಿರ್ದೇಶನ ಕೊಟ್ಟಿದ್ದಾರೆ. ಜುಲೈ ಎರಡನೇ ವಾರದಲ್ಲಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವುದಕ್ಕೆ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಬಂದಿದೆ.
ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ವಿವಿಗಳು, ಸರ್ಕಾರದ ಗ್ರೀನ್ ಸಿಗ್ನಲ್ ಕೊಟ್ರೆ ಜುಲೈ ಕೊನೆ ವಾರದಲ್ಲಿ ಪರೀಕ್ಷೆ ಫಿಕ್ಸ್ ಮಾಡಲಿವೆ. ಲಸಿಕಾ ಅಭಿಯಾನ ಪೂರ್ಣಗೊಂಡ ಬಳಿಕ ಪರೀಕ್ಷೆ ನಡೆಸಲು ವಿವಿಗಳು ನಿರ್ಧರಿಸಿವೆ ಎಂದು ಬೆಂಗಳೂರು ಕೇಂದ್ರ ವಿವಿ ಕುಲಪತಿ ಲಿಂಗರಾಜು ಗಾಂಧಿ ತಿಳಿಸಿದ್ದಾರೆ.
geethanjali
Publish Date: Sat, 03 Jul 2021 (18:40 IST)
Updated Date: Sat, 03 Jul 2021 (18:45 IST)