Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ ಡಿಕೆಶಿ

ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ  ಡಿಕೆಶಿ
bangalore , ಶನಿವಾರ, 3 ಜುಲೈ 2021 (15:31 IST)
ಯಾರ್ಯಾರು ಕಾಂಗ್ರೆಸ್ ಬರಬೇಕು ಅಂತ ಬಯಸಿದ್ದಾರೆ ಅವರೆಲ್ಲರಿಗೂ ಹೇಳುತ್ತಿದೇನೆ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ .ಮೊದಲು ಅರ್ಜಿ ಬರಲಿ ಆಮೇಲೆ ನಾವು ಸ್ಟ್ಯಾಂಡ್ ತಗೆದುಕೊಳ್ಳುತ್ತೇವೆ.ಅರ್ಜಿ ಬರೋದಕ್ಕೂ ಮುನ್ನ ನೀವು ಟಾರ್ಗೆಟ್ ಯಾಕೆ ಮಾಡುತ್ತಿದ್ದೀರಾ ಅಂತಾ ಮಾಧ್ಯಮಗಳಿಗೆ ಪ್ರಶ್ನೆ ಡಿಕೆಶಿ ಪ್ರಶ್ನೆ ಹಾಕಿದರು.ನನ್ನ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ .ನೀವು ಗೊಂದಲ ಮಾಡ್ತಿದ್ದೀರಿ ಅಷ್ಟೇ,ಯಾರಿಗೆ ನಮ್ಮ ಪಕ್ಷದ ಮೇಲೆ ನಂಬಿಕೆ ಇದೆಯೋ ಅವರೆಲ್ಲರೂ ಬರಬಹುದು.ಯಾರುಬೇಕಾದ್ರು ಅರ್ಜಿ ಹಾಕಬಹುದು.17 ಜನರು ನನ್ನ ಸಂಪರ್ಕ ಮಾಡಿಲ್ಲ.ಬೇರೆಯವರು ಸಂಪರ್ಕ ಮಾಡಿದ್ದಾರೆ.ಆ 17 ಜನ ಅರ್ಜಿ ಹಾಕಬಹುದಾ ಅನ್ನೋ ಪ್ರಶ್ನೆಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ನೀವು ಬೇಕಾದರೂ ಹಾಕಬಹುದು ಎಂದ ಡಿಕೆಶಿ.ನಾನು ಕೇವಲ 17 ಜನರ ಬಗ್ಗೆ ಮಾತ್ರ ಹೇಳುತ್ತಿಲ್ಲ.ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಈಗ ಚರ್ಚೆ ಬೇಡ ಅಂತಾ  ಡಿಕೆಶಿ ಜಾರಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಎಂಟಿಬಿಗೆ ಟಾಂಗ್ ನೀಡಿದ ಡಿಕೆಶಿ