Publish Date: Sat, 11 Nov 2023 (16:22 IST)
Updated Date: Sat, 11 Nov 2023 (17:19 IST)
ಬರಪೀಡಿತ ಪ್ರದೇಶಗಳಿಗೆ 300 ಕೋಟಿ ರು.ಗಿಂತ ಹೆಚ್ಚು ಹಣ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ, ಹಲವು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಯಾವುದೇ ಜಿಲ್ಲೆಗೂ ಒಂದು ರುಪಾಯಿ ಹೋಗಿಲ್ಲ.
ಒಬ್ಬ ರೈತರಿಗೂ ಒಂದು ರುಪಾಯಿ ನೀಡಿಲ್ಲ. ಭೀಕರ ಬರಗಾಲದಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.