Select Your Language

Notifications

webdunia
webdunia
webdunia
webdunia

ಕುಂದಾನಗರಿಯಲ್ಲಿ ನಾಟಕ ಹಬ್ಬ ಶುರು

ಕುಂದಾನಗರಿಯಲ್ಲಿ ನಾಟಕ ಹಬ್ಬ ಶುರು
ಬೆಳಗಾವಿ , ಬುಧವಾರ, 25 ಸೆಪ್ಟಂಬರ್ 2019 (19:50 IST)
ಕುಂದಾನಗರಿ ಜನತೆಗೆ ನಾಟಕದ ರಸದೌತನ ದಿನಗಳು ಶುರುವಾಗಿವೆ.

ರಂಗ ಸಂಪದ ತಂಡವು ನಾಡಹಬ್ಬದ ನಿಮಿತ್ಯ ಸೆಪ್ಟೆಂಬರ್ 28 ರಿಂದ 29 ರಂದು ವಿವಿಧ ನಾಟಕ ಪ್ರದರ್ಶನ ಮಾಡಲಿದೆ ಎಂದು ತಂಡದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜನರ ಮನಗೆದ್ದ ರಂಗ ಸಂಪದ ತಂಡವು ನಾಡಹಬ್ಬದ ದಸರಾ ಪ್ರಯುಕ್ತ ಬೆಳಗಾವಿಯಲ್ಲಿ ಈ ವರ್ಷದ ನಾಟಕಗಳ ಪ್ರದರ್ಶನವನ್ನು ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಸೆಪ್ಟೆಂಬರ್ 28 ರಿಂದ ಪ್ರದರ್ಶನ ಮಾಡಲಿದ್ದೇವೆ.

ಕೃಷ್ಣಾ ಕೊಲ್ಹಾರ ಕುಲಕರ್ಣಿ ಉದ್ಘಾಟನೆ ಮಾಡಲಿದ್ದು, ಅದೇ ದಿನ ನಾಸತ್ತಿಲ್ಲ ಎಂಬ ನಾಟಕ ಪ್ರದರ್ಶನ ಮಾಡಲಾಗುತ್ತದೆ. ಸೆಪ್ಟೆಂಬರ್ 29 ರಂದು ಜಾಳಕೋಳ ಮತ್ತು ಸೆಪ್ಟೆಂಬರ್ 30 ರಂದು ಹುಚ್ಚರ ಸಂತೆ ಎಂಬ ಹಾಸ್ಯ ನಾಟಕ ಪ್ರದರ್ಶನ ಮಾಡಲಿದ್ದೇವೆ ಎಂದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಬಿಡುಗಡೆಗೆ ಮುಸ್ಲಿಂರು ಮಾಡಿದ್ದೇನು?