Select Your Language

Notifications

webdunia
webdunia
webdunia
webdunia

ಪ್ರವಾಸ ಮಾಡೋರನ್ನ ಬೇಡ ಅನ್ನಲ್ಲ,ವೀಕ್ಷಣೆ ಮಾಡಲಿ-ಡಿಸಿಎಂ ಡಿಕೆ ಶಿವಕುಮಾರ್

DK Shivakumar
bangalore , ಮಂಗಳವಾರ, 21 ನವೆಂಬರ್ 2023 (17:00 IST)
ಇಂದು ಸುರ್ಜೆವಾಲ ರಾಜ್ಯಕ್ಕೆ ಬರುತ್ತಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಪಕ್ಷದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡೋಕೆ ಬರ್ತಿದ್ದಾರೆ, ಅವರು ಬಂದು ಹೋದ್ಮೇಲೆ ಎಲ್ಲಾ ತಿಳಿಸ್ತೀನಿ.ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡ್ತೀನಿ.ಕಾರ್ಯಕರ್ತರು ಸೇರಿ ಎಲ್ಲರಿಗೂ ನಿಗಮ ಮಂಡಳಿ ಕೊಡಬೇಕು.ಒಂದೇ ಸಲ ಎಲ್ಲರಿಗೂ ಮಾಡೋಕಾಗಲ್ಲ, 2-3 ಸ್ಟೇಜ್ ನಲ್ಲಿ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇಂದಿನಿಂದ ವಿಪಕ್ಷ ನಾಯಕರ ಬರ ಪ್ರವಾಸ ವಿಚಾರವಾಗಿ ಸೆಂಟ್ರಲ್ ಗವರ್ನಮೆಂಟ್ ರಿಪೋರ್ಟ್ ಕೊಟ್ಟಿದೆ, ಪ್ರವಾಸ ಮಾಡೋರ್ನ ಬೇಡ ಅನ್ನಲ್ಲ ವೀಕ್ಷಣೆ ಮಾಡಲಿ,ಎಲ್ಲರನ್ನು ಕರೆದು ಕೊಂಡು ಹೋಗಿ ಹಣ ಬಿಡುಗಡೆ ಮಾಡಿಸಿಕೊಂಡು ಬರಲಿ,ನಮ್ಮ ರಾಜ್ಯಕ್ಕೆ 150 ದಿನ ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡ್ಲಿ,ಪ್ರವಾಸ ಮಾಡ್ಲಿ, ಪಾರ್ಟಿ ಕಟ್ಟಿಕೊಳ್ಳಲಿ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗ್ತಿರುವ ಅನ್ಯಾಯ ಸರಿಪಡಿಸಲಿ,ಆಗ ಇವರು ರಾಜ್ಯಕ್ಕೆ, ದೇಶಕ್ಕೆ ಒಳ್ಳೇದು ಮಾಡ್ತಿದ್ದಾರೆ ಅಂತ ಅನ್ಕೊತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಟಿ ಬಯೋಟಿಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ- ದಿನೇಶ್ ಗುಂಡೂರಾವ್