Publish Date: Mon, 20 Nov 2023 (16:00 IST)
Updated Date: Mon, 20 Nov 2023 (16:16 IST)
ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಸಂಭಾಷಣೆ ಕುರಿತು ಬಿಜೆಪಿ ಆರೋಪ ವಿಚಾರ ಸಂಬಂಧ ಬಾಗಲಕೋಟೆಯಲ್ಲಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಇದನ್ನು ನೋಡಿದ್ರೆ ನಗು ಬರುತ್ತೆ. ಇವರೆಲ್ಲರೂ ಸತ್ಯಹರಿಶ್ಚಂದ್ರ ರಾಜನ ಮನೆಯಲ್ಲಿ ಬಾಡಿಗೆ ಇದ್ದೋರ ಹಾಗೆ ಮಾತಾಡ್ತಾರಲ್ಲ. ಇಪ್ಪತ್ತು ವರ್ಷ ನೋಡಿಲ್ವಾ ಇವರ ಕಥೆ ಏನಿದೆ ಅನ್ನೋದು. ಬೇರೆಯವರಿಗೆ ಬೇರೆ ತರಹ ಅರ್ಥ ಆಗಬಹುದು. ಮಾತಾಡ್ಲಿ, ಆಪಾದನೆ ಮಾಡ್ಲಿ ಒಂದು ಬೆರಳು ಮುಂದೆ ಮಾಡುವಾಗ ನಾಲ್ಕು ಬೆರಳು ನಮ್ಮ ಕಡೆ ಇರ್ತಾವೆ ಅನ್ನೋ ಅರಿವು ಇರಬೇಕು.