Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಪ್ರಧಾನಿಯಾಗಲೇ ಬೇಕು ಎಂದವರಾರು?

ರಾಹುಲ್ ಗಾಂಧಿ ಪ್ರಧಾನಿಯಾಗಲೇ ಬೇಕು ಎಂದವರಾರು?
ವಿಜಯಪುರ , ಬುಧವಾರ, 27 ಫೆಬ್ರವರಿ 2019 (18:30 IST)
ನರೇಂದ್ರ ಮೋದಿ‌ ಹೋಗಲೇ ಬೇಕು, ಬಿಜೆಪಿ ತೊಲಗಲೇ ಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಹೇಳಿಕೆ ನೀಡಿದ್ದು, ಮೋದಿ ಅವರು ಕಪ್ಪು ಹಣ ತರುತ್ತೇವೆ, ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು ಎಲ್ಲಿ ‌ಬಂದಿದೆ? ಪ್ರತಿ‌ವರ್ಷ 2 ಕೋಟಿ‌ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಬರೀ 27 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ. ಮೋದಿಯವರೇ ಎಲ್ಲಿ‌ ಭ್ರಷ್ಟಾಚಾರ ನಿಂತಿದೆ? ಯಾರ ಬಳಿ ಕಪ್ಪು ಹಣ ಇತ್ತೋ ಅವರು ವೈಟ್ ಮನಿ ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಿದರು.

ಮೋದಿ‌ ಹೇಳಿದ್ದ ಒಂದೇ ಒಂದು‌ ಕೆಲಸ ಮಾಡಿಲ್ಲ. ಇವತ್ತು ರೈತರ ಸಾಲ ಮನ್ನಾ ಮಾಡಿದ್ದರೆ, ಅದು ನಮ್ಮ‌ ಸರ್ಕಾರ ಎಂದರು.
ನೀರವ ಮೋದಿ, ಲಲಿತ ಮೋದಿ, ಮಲ್ಯಾ ಅಂತಹವರ ಸಾಲ ಮನ್ನಾ ಮಾಡುತ್ತಾರೆ. ಮಾತೆತ್ತಿದರೆ ನಾನು ಚೌಕಿದಾರ್, ನಾನು ಚೌಕಿದಾರ್ ಎನ್ನುತ್ತೀರಾ. ನೀವು ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ್ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ರಫೆಲ್‌ನಲ್ಲಿ 39 ಸಾವಿರ ಕೋಟಿ‌ ಹಗರಣ ನಡೆದಿದೆ. ನರೇಂದ್ರ ಮೋದಿ‌ ಐದು‌ ವರ್ಷದ ಸಾಧನೆಗಳ ಕುರಿತು ಎಲ್ಲಿಯೂ ಮಾತಾನಾಡಲ್ಲ. ಯಾಕೆಂದರೆ ಅವರಿಗೆ ಮಾತನಾಡಲು ಏನು‌ ಇಲ್ಲ. ಇಂದು ಯಡಿಯೂರಪ್ಪ ‌ವಿರೋಧ‌ ಪಕ್ಷದ ನಾಯಕನಾಗಿ ಅವರ ಕೆಲಸ ಮಾಡಿಲ್ಲ. ಮಿಸ್ಟರ್ ಯಡಿಯೂರಪ್ಪ ಕೋಟ್ಯಾಂತರ ಹಣ ಕೊಟ್ಟು ನಮ್ಮ ಶಾಸಕರನ್ನು ಕೊಂಡು ಕೊಳ್ಳಲು ನೋಡಿದ್ದರು. ಯಡಿಯೂರಪ್ಪ ನವರಿಗೆ ಹಣ ಸರಬರಾಜು ಮಾಡಿದ್ದು ಮಿಸ್ಟರ್ ಚೌಕಿದಾರ್, ಹಾಗೂ ಶಾ ಎಂದು ಟೀಕಿಸಿದರು.

ಈ ಅಮಿತಾ ಶಾ ಸೇರಿದಂತೆ ಹಲವು ಬಿಜೆಪಿಗರು ಜೈಲಿಗೆ ಹೋಗಿ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಬದಲಾವಣೆ ಆಗಲೇಬೇಕು. ನರೇಂದ್ರ ಮೋದಿ‌ ಹೋಗಲೇ ಬೇಕು, ಬಿಜೆಪಿ ತೊಲಗಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಟೆಂಪಲ್ ರನ್: ಈಗ ಸುಮಲತಾ ಸರದಿ!