Publish Date: Wed, 27 Feb 2019 (14:30 IST)
Updated Date: Wed, 27 Feb 2019 (14:31 IST)
ಮುಂಬರುವ ಲೋಕಸಭೆ ಚುನಾವಣೆಯ ಕಣದಲ್ಲಿ ಸಚಿವೆ ಜಯಮಾಲಾ ಸ್ಪರ್ಧೆ ಮಾಡುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.
ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಜಯಮಾಲಾ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವೆ ಜಯಮಾಲಾ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದ ಹಾಗೆ. ಪಕ್ಷ ಏನು ಹೇಳುತ್ತೋ ಅದನ್ನು ನಾನು ಪಾಲಿಸ್ತೇನೆ. ಲೋಕಸಭೆ ಟಿಕೆಟ್ ಬಗ್ಗೆ ನನ್ನ ಜೊತೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿಲ್ಲ. ಪಕ್ಷ ಹೇಳಿದಂತೆ ನಡೆದುಕೊಳ್ತೇನೆ. ಈಗ ಇರುವ ಸ್ಥಾನದಲ್ಲಿ ಖುಷಿಯಾಗಿದೀನಿ ಎಂದಿದ್ದೇನೆ.
ಇನ್ನು ಟಿಕೆಟ್ ಕೊಟ್ಮೇಲೆ ಒಪ್ಕೊಳ್ಳೋದೋ ಬಿಡೋದೋ ಅಂತ ಹೇಳ್ತೀನಿ ಎಂದು ಜಯಮಾಲಾ ಹೇಳಿದ್ದಾರೆ.