Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಸಿಗಬೇಕೆಂದು ಶಾಸಕರ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ಸಚಿವ ಸ್ಥಾನ ಸಿಗಬೇಕೆಂದು ಶಾಸಕರ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?
ಕಲಬುರಗಿ , ಶುಕ್ರವಾರ, 7 ಡಿಸೆಂಬರ್ 2018 (20:04 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ದಿನ ಫಿಕ್ಸ್ ಆಗಿರುವಂತೆ ಶಾಸಕರು ಒಂದೆಡೆ ಒತ್ತಡ ತಂತ್ರಕ್ಕೆ ಮೊರೆಹೋಗಿದ್ದರೆ, ಶಾಸಕರ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಶಾಸಕರಿಗೆ ಸಚಿವಸ್ಥಾನ ಸಿಗಬೇಕೆಂದು ತರಹೇವಾರಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ಅವರ ಪುತ್ರ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಅಜಯಸಿಂಗ್ ಗೆ ಸಚಿವ ಸ್ಥಾನ ಸಿಗಬೇಕು. ಹೀಗಂತ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಶಾಸಕ ಅಜಯಸಿಂಗ್ ಅಭಿಮಾನಿಗಳು, ಜೇವರ್ಗಿಯ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಇನ್ನು ಮುಸ್ಲಿಂ ಬಾಂಧವರೂ ಸಹ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಜಯಸಿಂಗ್ ಗೆ ಸ್ಥಾನ ಸಿಗಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಮಟ್ಟದ ಶೂಟಿಂಗನಲ್ಲಿ ರಾಜ್ಯದ ಪ್ರತಿಭೆಗೆ ಬೆಳ್ಳಿ ಪದಕ