Publish Date: Thu, 07 Nov 2019 (13:41 IST)
Updated Date: Thu, 07 Nov 2019 (13:43 IST)
ಬೆಂಗಳೂರು : ಕಾಂಗ್ರೆಸ್ ನಲ್ಲೇ ಡಿಕೆಶಿ ಓಟಕ್ಕೆ ಬ್ರೇಕ್ ಹಾಕುವ ವಿಚಾರ ಯಾವ ಬ್ರೇಕ್ ಇಲ್ಲದೇ ನನ್ನ ಗಾಡಿ ನಡೀತಿದೆ. ಕಾನೂನು ಮತ್ತು ಕಾಲ ಎರಡೂ ಉತ್ತರ ಕೊಡುತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ನಾನು ಮಠ ಸೇರಲ್ಲ, ಆದ್ರೆ ಎಲ್ಲಾ ಮಠಗಳ ಆಶೀರ್ವಾದವಿದೆ. ವಿಪಕ್ಷ ಸ್ಟ್ರಾಂಗ್ ಇದ್ದಾಗಷ್ಟೇ ಸರ್ಕಾರ ಸ್ಟ್ರಾಂಗ್ ಆಗಿರುತ್ತೆ. ಆದರೆ ನಮ್ಮಂತಹವರನ್ನು ಸರ್ಕಾರ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷಗೆ ಸಿದ್ದನಿದ್ದೇನೆ. ನಾಯಕರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ.
ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯ ಹೇಳಿಕೆಗೆ ನಾನು ಕಾಮೆಂಟ್ ಮಾಡಲ್ಲ. ಯಾರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.