Select Your Language

Notifications

webdunia
webdunia
webdunia
webdunia

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವಿರೋಧಿ?

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವಿರೋಧಿ?
ಬೆಂಗಳೂರು , ಸೋಮವಾರ, 15 ಏಪ್ರಿಲ್ 2019 (17:46 IST)
ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಿರುವ ಸಂದರ್ಭದಲ್ಲಿ ತಮಗೆ ಸಂಬಂಧವಿಲ್ಲ ವಿಷಯದ ಬಗ್ಗೆ ಮಾತನಾಡುತ್ತಿರೋದು ಸರಿಯಲ್ಲ. ಹೀಗಂತ ರಾಷ್ಟ್ರೀಯ ಬಸವ ದಳ ‌ಕೇಂದ್ರ ಸಮಿತಿ ಎಚ್ಚರಿಕೆ ನೀಡಿದೆ.

ಡಿ.ಕೆ.ಶಿವಕುಮಾರ್ ಹೇಳಿಕೆಗೆ ರಾಷ್ಟ್ರೀಯ ಬಸವ ದಳ ‌ಕೇಂದ್ರ ಸಮಿತಿ ಕಾರ್ಯದರ್ಶಿ ಬಸವಾನಂದ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.

12 ನೇ ಶತಮಾನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವನ್ನು ಬಸವಣ್ಣ ಸ್ಥಾಪಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಂವಿಧಾನಿಕ ಅಲ್ಪಸಂಖ್ಯಾತ ಸ್ಥಾನಮಾನ ಹೋರಾಟ ನಡೆಯುತ್ತಲೇ ಬಂದಿದೆ.
ಆದರೆ ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಿರುವ ಸಂದರ್ಭದಲ್ಲಿ ತಮಗೆ ಸಂಬಂಧವಿಲ್ಲ ವಿಷಯದ ಬಗ್ಗೆ ಮಾತನಾಡುತ್ತಿರೋದು ಸರಿಯಲ್ಲ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಮುಖಂಡರೋ ಅಥವಾ ಕಾಂಗ್ರೆಸ್ ಪಕ್ಷದ ವಿರೋಧಿಗಳೋ ಎಂದು ಕೇಳಿರುವ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅವರಿಗೆ ಮಾತನಾಡೋ ನೈತಿಕತೆಯಿಲ್ಲ. ‌ಅವರು ಈ ಧರ್ಮದ ಮುಖಂಡರು ಅಲ್ಲ. ಕಾಂಗ್ರೆಸ್ ಹೈಕಮಾಂಡೂ ಅಲ್ಲ. ‌ಈ ಬಗ್ಗೆ‌ರಾಹುಲ್‌ಗಾಂಧಿ ಮಾತನಾಡಬೇಕು ಇಲ್ಲ ಪಕ್ಷದ ಅಧ್ಯಕ್ಷರು ಮಾತನಾಡಬೇಕು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೆಹರು, ಇಂದಿರಾ ಸೇನೆ ಕಟ್ಟಿದಾಗ ಮೋದಿಗೆ ಪ್ಯಾಂಟ್‌ ಹಾಕೋದು ಗೊತ್ತಿರಲಿಲ್ಲ: ಕಮಲ್ ನಾಥ್