Select Your Language

Notifications

webdunia
webdunia
webdunia
webdunia

ಮನೆ ಹಂಚಿಕೆ ಮಾಡದ ಸರ್ಕಾರದ ನಡೆಗೆ ಅಸಮಾಧಾನ

ಮನೆ ಹಂಚಿಕೆ ಮಾಡದ ಸರ್ಕಾರದ ನಡೆಗೆ ಅಸಮಾಧಾನ
ಹುಬ್ಬಳ್ಳಿ , ಶುಕ್ರವಾರ, 3 ಸೆಪ್ಟಂಬರ್ 2021 (10:08 IST)
ಹುಬ್ಬಳ್ಳಿ : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ. ಇದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆ ಹಂಚಿಕೆ ಮಾಡುವಂತೆ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಡುವುದಿದ್ದರೆ ಬಿಡಲಿ, ಇನ್ನು ಮುಂದೆ ಮನೆ ಹಂಚಿಕೆ ಮಾಡುವಂತೆ ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಅವರು ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಮನೆ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಇನ್ನೊಂದು ಸಲ ಕೊನೆಯದಾಗಿ ಪತ್ರ ಬರೆಯುತ್ತೇನೆ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ, ನಾನೇನು ಬಿಕ್ಷೆ ಬಿಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಶಾಲೆಗಳನ್ನು ಆರಂಭಿಸಬೇಕೆಂದು ನಾನು ಎಂದು ಸಲಹೆ ನೀಡಿದ್ದೆ. 1 ರಿಂದ 6 ನೇ ತರಗತಿ ಕೂಡ ಆರಂಭಿಸಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತ: ರಾಜನಾಥ್ ಸಿಂಗ್ ಹೇಳಿಕೆ