Select Your Language

Notifications

webdunia
webdunia
webdunia
webdunia

ಅಂಗವಿಕಲ ವೃದ್ಧೆಯ ಮನೆಯಲ್ಲಿ ಆ ಕೆಲಸ ಮಾಡಿದವರ ಬಂಧನ

ಅಂಗವಿಕಲ ವೃದ್ಧೆಯ ಮನೆಯಲ್ಲಿ ಆ ಕೆಲಸ ಮಾಡಿದವರ ಬಂಧನ
ಬೆಂಗಳೂರು , ಮಂಗಳವಾರ, 14 ಜನವರಿ 2020 (18:50 IST)
ಅಂಗವಿಕಲ ವೃದ್ಧೆಯ ಮನೆಗೆ ನುಗ್ಗಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಂಗವಿಕಲ ವೃದ್ಧೆಯ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಗೇಪಲ್ಲಿಯ ನಾರಾಯಣಸ್ವಾಮಿ ಹಾಗೂ ಮಂಜುನಾಥ್ ಎಂದು ಆನೇಕಲ್ ಪೊಲೀಸರು ತಿಳಿಸಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಆನೇಕಲ್ ಪಟ್ಟಣದ ಲೂರ್ದು ಮೇರಿ ಎಂಬ ಅಂಗವಿಕಲ ಒಂಟಿ ಮಹಿಳೆ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕೈಕಾಲು ಕಟ್ಟಿ, ಚಿನ್ನ ಬೆಳ್ಳಿ ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಪ್ರಕರಣದ ಸಂಬಂಧ ದೂರು ದಾಖಲು ಮಾಡಿಕೊಂಡ ಆನೇಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮುರುಳಿಧರ್ ನೇತೃತ್ವದ ತಂಡ ಕಳ್ಳರನ್ನು ಬಂಧಿಸಿದ್ದು, ಕದ್ದೊಯ್ದಿದ್ದ ಚಿನ್ನ ಬೆಳ್ಳಿ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ ನಾರಾಯಣಗೌಡರ ಪತ್ನಿ ಹೀಗಾ ಮಾಡಿಕೊಳ್ಳೋದು?