ನೇಪಾಳ ಮೂಲದ ಅಂತರಾಜ್ಯ ಕಳ್ಳರ ಬಂಧನ

Webdunia
ಬುಧವಾರ, 1 ಆಗಸ್ಟ್ 2018 (20:42 IST)
ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ‌ ನಾಲ್ವರು ಅಂತರರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ‌ ನಾಲ್ವರು ಅಂತರರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಬಳಿ ರಸ್ತೆಗೆ ಅಡ್ಡಲಾಗಿ ಕಲ್ಲು ಇಟ್ಟು ದರೋಡೆಗೆ ಯತ್ನಿಸಿದ್ದ ವೇಳೆ ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಂಧಿತರು ದೀಲು ಆವೋಜಿ, ರಾವ್ ಬಹದ್ದೂರ್ ಕಾಮಿ, ಬರೀಸಿಂಗ್ ಡೋಲಿ, ಕಿರಣ ಆವೋಜಿ ಎಂದು ಗುರುತಿಸಲಾಗಿದೆ. ಜುಲೈ 15 ರಂದು ಕೆರೂರು ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ದರೋಡೆಗೆ  ಯತ್ನಿಸಿದ್ದರು. ಆದ್ರೆ ಕೈಗೆ ಏನೂ ಸಿಗದೆ ಕಳ್ಳತನದ ಕೆಲಸ ಸಕ್ಸಸ್ ಆಗಿರಲಿಲ್ಲ.

ಸದ್ಯ ವಿಚಾರಣೆ ವೇಳೆ ಡಿಸಿಸಿ ಬ್ಯಾಂಕ್  ಕಳ್ಳತನ ಯತ್ನದ ಬಗ್ಗೆ ಬಾಯಿಬಿಟ್ಟಿದ್ದಾರೆ. ಮಹಾರಾಷ್ಟ್ರ, ಮತ್ತು ಬೆಳಗಾವಿಯಲ್ಲಿ ಸಹ ಕಳ್ಳತನ ಮಾಡಿರೋದಾಗಿ ಬಾಯಿಬಿಟ್ಟಿದ್ದಾರೆ. ಇನ್ನು ಇವರಲ್ಲಿ ಐವರ ತಂಡ ಇದ್ದು ಓರ್ವ ಪರಾರಿಯಾಗಿದ್ದಾನೆ. ‌ಎಲ್ಲರೂ ನೇಪಾಳದ ನಿವಾಸಿಗಳಾಗಿದ್ದು ಮುಂಬೈನಲ್ಲಿ ವಾಸವಾಗಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗುವುದಕ್ಕಿಂತಲೂ ಡಿಕೆ ಶಿವಕುಮಾರ್ ಗೆ ಎದುರಾಗಿದೆ ದೊಡ್ಡ ತಲೆನೋವು

Bengaluru: ನಾನು ವಿಐಪಿ ಅಲ್ಲ, ತೆರಿಗೆದಾರ ನನ್ನ ಪತ್ನಿ ಗರ್ಭಿಣಿ, ವಿಐಪಿಗಳಿಗಾಗಿ ರಸ್ತೆ ಯಾಕೆ ಬಂದ್ ಮಾಡಿದ್ದೀರಿ: ವ್ಯಕ್ತಿಯ ಆಕ್ರೋಶ Video

ಹಿಮಾಚಲ ಪ್ರದೇಶದಲ್ಲಿ ಬೆಂಗಳೂರಿನ 7 ಜನರ ಸಾವು

ತಾಯಿ ಕಳೆದುಕೊಂಡಿದ್ದ 9 ನೇ ತರಗತಿ ವಿದ್ಯಾರ್ಥಿನಿ ತಮ್ಮನನ್ನು ಕಂಕುಳಲ್ಲಿ ಹಿಡಿದು ಕ್ಲಾಸ್ ಗೆ ಬಂದಳು: ಕರುಳು ಹಿಂಡುವ ದೃಶ್ಯ video

ಹೊಸ ಸಿಎಂ ಡಿಕೆ ಶಿವಕುಮಾರ್ ಗೆ ಇದೊಂದು ಹೂ ಎಂದರೆ ಅಲರ್ಜಿಯಂತೆ: ಅದ್ಯಾಕೆ ಗೊತ್ತಾ

ಮುಂದಿನ ಸುದ್ದಿ