Select Your Language

Notifications

webdunia
webdunia
webdunia
webdunia

ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಆದದ್ದಾದರೂ ಏನು?

ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಆದದ್ದಾದರೂ ಏನು?
ಮಂಡ್ಯ , ಸೋಮವಾರ, 23 ಜುಲೈ 2018 (14:59 IST)
ಆ ಮಹಿಳೆ ಎಂದಿನಂತೆ ನಸುಕಿನ ಜಾವ ತಮ್ಮ ಮನೆ, ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದಳು. ಆದರೆ ಇಂದೆಕೋ ಆಕೆಯ ಗ್ರಹಚಾರ ಸರಿಯಾಗಿದ್ದಿಲ್ಲ ಎನಿಸುತ್ತದೆ. ಬೆಳ್ಳಂಬೆಳಗ್ಗೆ ಆ ಮಹಿಳೆ ಗಾಬರಿಯಾಗಿದ್ದಾಳೆ. ಅಂಥದ್ದೇನಾಯ್ತು? ಎನ್ನೋದನ್ನು ತಿಳಿಯಲು ಮುಂದೆ ಓದಿ…

ಬೈಕ್ ನಲ್ಲಿ ಬಂದ ಅಪರಿಚಿರಿಬ್ಬರು ಟೀ ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ  ಮಹಿಳೆಯ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಸುಭಾಷ್ ನಗರದಲ್ಲಿ ಘಟನೆ ನಡೆದಿದೆ. ಸುಭಾಷ್ ನಗರದಲ್ಲಿ ನಸುಕಿನ ಜಾವ ಸುಮಾರು 5.30 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ರತ್ನಮ್ಮ ಚಿನ್ನದ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಸುಭಾಷ್ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದಲ್ಲಿರುವ ತಮ್ಮ ಟೀ ಕ್ಯಾಂಟೀನ್ ಆರಂಭಿಸುವ ಸಲುವಾಗಿ ಅಂಗಡಿಯ ಮುಂದೆ ಕಸ ಗುಡಿಸುವಲ್ಲಿ ನಿರತರಾಗಿದ್ದರು. ವೇಳೆ ಟೀ ಕುಡಿಯುವ ಸೋಗಿನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ  ಇಬ್ಬರು ವ್ಯಕ್ತಿಗಳು ಹಿಂದಿನಿಂದ  ಬಂದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ ಎಂದು ರತ್ನಮ್ಮ ಮಾಹಿತಿ ನೀಡಿದ್ದಾರೆ.

ಕಳೆದ ವಾರದ ಹಿಂದಷ್ಟೆ ಬೈಕ್ ನಲ್ಲಿ ಬಂದ ಅಪರಿಚಿತರು ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ಜಗದಂಬಾ ಎಂಬುವರ ಮಾಂಗಲ್ಯ ಸರ ಕಸದ ಪರಾರಿಯಾಗಿದ್ದದ್ದರು. ಒಟ್ಟು 6೦ ಗ್ರಾಂ ಚಿನ್ನದ ಸರ ಕಳುವಾಗಿದೆ. ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯೊಂದಿಗೆ ಚಕ್ಕಂದ: ಯುವಕರಿಗೆ ಗೂಸಾ