Webdunia - Bharat's app for daily news and videos

Install App

ಸಿಎಂ ಹೆಚ್.ಡಿ.ಕೆ ನಿವಾಸ ಮಾರಾಟಕ್ಕೆ ಇದೆ!

Webdunia
ಬುಧವಾರ, 1 ಆಗಸ್ಟ್ 2018 (20:38 IST)
ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ ಅಂತ ಹುಬ್ಬಳ್ಳಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆ ಮಾಡಿದ್ದರು. ಉತ್ತರ ಕರ್ನಾಟಕವನ್ನ ಅಭಿವೃದ್ಧಿ ಪಡಿಸ್ತಿನಿ, ಪಕ್ಷ ಸಂಘಟನೆ ಮಾಡ್ತಿನಿ ಅಂತ ಹೇಳಿಕೊಂಡಿದ್ದರು. ಆದ್ರೆ ಮೂರು ನಾಲ್ಕು ದಿನ ಮನೆಯಲ್ಲಿ ಉಳಿದುಕೊಂಡಿದ್ದು‌ ಬಿಟ್ಟರೆ ಇತ್ತ ಮರಳಿ‌ ನೋಡಲಿಲ್ಲ. 

ಈಗ ಮನೆ ಮಾರಾಟದ ಬಗ್ಗೆ ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ವಾಸವಿದ್ದ ಬಾಡಿಗೆ ಮನೆಯನ್ನು  ಮಾಲೀಕ ಸುರೇಶ ರಾಯರಡ್ಡಿ ಮಾರಾಟ ಮಾಡಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. 10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಅವರ ಖಾಸಗಿ ಕಚೇರಿ ಈಗ ಮಾರಾಟಕ್ಕಿದೆ ಅಂತ ಜಾಹೀರಾತು ಪ್ರಕಟವಾಗಿದೆ. 

ಕಳೆದ 2016 ನವೆಂಬರ್ ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯ ಮಾಯಾಕರ್ ಕಾಲೋನಿಯ ನಿವಾಸವನ್ನು ಅದ್ದೂರಿಯಾಗಿ‌ ಗೃಹ ಪ್ರವೇಶ ಮಾಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಮನೆ ಮಾಡಿ, ಆ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಜನರಿಗೆ ಹತ್ತಿರವಾಗುವ ಯೋಜನೆಯಾಗಿತ್ತು, ಆದರೆ, ಇದೀಗ ಮನೆಯ ಮಾಲೀಕ ಮನೆಯನ್ನು ಮಾರಾಟ ಸೆರಿದಂತೆ ಕುಮಾರಸ್ವಾಮಿ ಬಳಕೆ ಮಾಡುತ್ತಿದ್ದ ಕಚೇರಿ ಸಹ ಮಾರಾಟಕ್ಕಿಡಲಾಗಿದೆ. ನನ್ನ ವೈಯಕ್ತಿಕ ಕಾರಣದಿಂದಾಗಿ ಮನೆಯನ್ನು ಮಾರಾಟ ಮಾಡುತ್ತಿದ್ದೇನೆ. ಈ ಬಗ್ಗೆ   ಕುಮಾರಸ್ವಾಮಿಯವರಿಗೆ ಯಾವುದನ್ನು ತಿಳಿಸಿಲ್ಲ ಎಂದು ಹೇಳಿದ್ದಾರೆ. ಆದ್ರೆ ಕುಮಾರಸ್ವಾಮಿ ಸದ್ಯಕ್ಕೆ ಅದೇ ಮನೆಯಲ್ಲಿ ಇದ್ದಾರೆ. ನಾನು ಮಾರಾಟ ಮಾಡಿದ ಬಳಿಕ, ಅದು ಖರೀದಿಸಿದವರಿಗೆ ಸೇರುತ್ತೆ ಅಂತಾ ಮನೆ ಮಾಲೀಕ ಸುರೇಶ ರಾಯರೆಡ್ಡಿ ಹೇಳಿದ್ದಾರೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನೆ ನೀಡಿದ್ದ ಸುರೇಶ ರಾಯರಡ್ಡಿ, ಬಾಡಿಗೆ ಪಡೀತಿರ್ಲಿಲ್ವಂತೆ. ಬಾಡಿಗೆಯ ಬದಲಾಗಿ ಮುಖ್ಯಮಂತ್ರಿ ಆದ್ಮೇಲೆ ರೈತರ ಸಾಲಮನ್ನಾ ಮಾಡ್ಬೇಕು ಅಂತ ಕಂಡೀಷನ್ ಹಾಕಿದ್ರಂತೆ. ಇವ್ರ ಕಂಡೀಶನ್ ಪ್ರಕಾರ ಸಿಎಂ ಅಲ್ಪ ಸ್ವಲ್ಪ ಸಾಲವನ್ನೂ ಮನ್ನಾ ಮಾಡಿದ್ದಾರೆ ಅಂದುಕೊಂಡ್ರೂ, ಇದು ಸುರೇಶ ರಾಯರೆಡ್ಡಿ ಅವರಿಗೆ ತೃಪ್ತಿ ತಂದಿರ್ಲಿಕ್ಕಿಲ್ಲ. ಕುಮಾರಣ್ಣ ಈಗ ರಾಜ್ಯದ ದೊರೆ. ಹೀಗಾಗಿ ಮನೆ ಖಾಲಿ ಮಾಡಿ ಅಂತ ಹೇಗೆ ಕೇಳೋದು ಅಂತ ಯೋಚಿಸಿ ಸುರೇಶ ರಾಯರಡ್ಡಿ ಮನೆ ಮಾರಾಟಕ್ಕಿಟ್ಟಿರ್ಬಹುದು ಅನ್ನೋ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರ್ತಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments