Select Your Language

Notifications

webdunia
webdunia
webdunia
webdunia

ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿದ ಡಿಸಿಪಿ ಅಣ್ಣಾಮಲೈ. ಕಾರಣವೇನು ಗೊತ್ತಾ?

ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿದ ಡಿಸಿಪಿ ಅಣ್ಣಾಮಲೈ. ಕಾರಣವೇನು ಗೊತ್ತಾ?
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (08:19 IST)
ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಕುಮಾರಸ್ವಾಮಿ ಲೇಔಟ್‌ ಪೋಲಿಸ್‌ ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಭರ್ಜರಿ ಸರ್ಜರಿ ನಡೆಸಿದ್ದಾರೆ.


ಕುಮಾರಸ್ವಾಮಿ ಲೇಔಟ್‌ ಪೋಲಿಸ್‌ ಠಾಣೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದು, ಇತ್ತೀಚೆಗೆ ಪಿಎಸ್‌ ಐ ನರಸಿಂಹಯ್ಯ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಗ ಮತ್ತೊಂದು ಗುಂಪು ವಿಡಿಯೋ ಮಾಡಿ ದೃಶ್ಯವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಹಾಗೂ ಮತ್ತೆ ಕೆಲವರು ಠಾಣೆಯಲ್ಲಿದ್ದ ರೈಫಲ್‌ಗಳನ್ನು ಬಚ್ಚಿಟ್ಟು ತಮಗಾಗದ ಪೇದೆಗಳ ಮೇಲೆ ಅಧಿಕಾರಿಗಳಿಗೆ ದೂರು ನೀಡುವ ಮೂಲಕ ಸಂಚು ರೂಪಿಸಿಕೊಳ್ಳುತ್ತಿದ್ದರು.


ಈ ಬಗ್ಗೆ ಅಣ್ಣಾಮಲೈ ಮಾಹಿತಿ ಸಿಕ್ಕಿದ್ದು, ಸಿಬ್ಬಂದಿಗಳ ಮಧ್ಯ ನಡೆಯುತ್ತಿದ್ದ ಒಳಜಗಳವನ್ನು ತಡೆಯುವ ನಿಟ್ಟಿನಲ್ಲಿ  ಶುಕ್ರವಾರದಂದು ಏಕಾಏಕಿ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಜೆಟ್ ನ್ನು 4 ವರ್ಷಗಳ ಹಿಂದೆಯೇ ಮೋದಿ ನೀಡದಿರುವುದಕ್ಕೆ ಕಾರಣವೇನು ಗೊತ್ತಾ?