Select Your Language

Notifications

webdunia
webdunia
webdunia
webdunia

ಬೇಗ ಮದುವೆ ಮಾಡದ ಅಪ್ಪ – ಅಮ್ಮನಿಗೆ ಮಗ ಹೀಗಾ ಮಾಡೋದು?

ಬೇಗ ಮದುವೆ ಮಾಡದ ಅಪ್ಪ – ಅಮ್ಮನಿಗೆ ಮಗ ಹೀಗಾ ಮಾಡೋದು?
ವಿಜಯಪುರ , ಶನಿವಾರ, 7 ಡಿಸೆಂಬರ್ 2019 (19:11 IST)

ಅಪ್ಪ – ಅಮ್ಮನ ಮೇಲೆ ವಿನಾಕಾರಣ ಹಾಗೂ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಮಕ್ಕಳು ಹಲ್ಲೆ ನಡೆಸುತ್ತಿರೋ ಘಟನೆ ಮತ್ತೆ ಮರುಕಳಿಸಿದೆ.
 

ಆತನಿಗೆ ಮಾಡೋದಕ್ಕೆ ಕೆಲಸ ಏನೂಇಲ್ಲ. ದುಡಿದು ತಿನ್ನೋದನ್ನು ಕಲಿ ಅಂತ ತಂದೆ – ತಾಯಿ ಬುದ್ಧಿ ಮಾತು ಹೇಳಿದ್ರು.

ನೀನು ಸಂಪಾದನೆ ಶುರುಮಾಡಿದರೆ ಮದುವೆ ಮಾಡೋದಾಗಿ ತಿಳಿಸಿದ್ರು. ಆದರೆ ಕೆಲಸಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳದ ಮಗರಾಯನೊಬ್ಬ ಮದುವೆಯಾಗಿ ಹುಡುಗಿಯನ್ನು ಹುಡುಕುತ್ತಿಲ್ಲ ಅಂತ ತಂದೆ ಹೇಮಯ್ಯ, ತಾಯಿ ಶರಣಮ್ಮರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ವಿಜಯಪುರದ ಬಿಸನಾಳ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿರೋ ಮಗ ಶಂಕ್ರಯ್ಯ ತಾನೂ ಕೈ ಕೊಯ್ದುಕೊಂಡಿದ್ದಾನೆ. ಹಲ್ಲೆಗೊಳಗಾದ ಪಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್, ಎಸಿ ಕಚೇರಿಗೆ ಆರ್ ಸಿ ದಿಢೀರ್ ಭೇಟಿ ; ಹಿರಿಯ ಅಧಿಕಾರಿಗಳ ಪಾಡು ಹೀಗಾಯ್ತು