Publish Date: Tue, 25 Apr 2023 (19:00 IST)
Updated Date: Tue, 25 Apr 2023 (19:41 IST)
ಸಿ.ವಿ.ರಾಮನ್ ನಗರ ಬಿಜೆಪಿ ಅಭ್ಯರ್ಥಿ ಶ್ರೀ ಎಸ್.ರಘು ಮೆಗಾ ರೋಡ್ ಶೋ ಮಾಡ್ತಿದ್ದು,ಬೆನ್ನಿಗಾನಹಳ್ಳಿ ವಾರ್ಡ್ ಕೃಷ್ನೈನ ಪಾಳ್ಯದಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಘು ಪೂಜೆ ಸಲ್ಲಿಸಿದರು.ತೆರೆದ ವಾಹನದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದು,ಮೆಗಾ ರೋಡ್ ಶೋ ಮೂಲಕ ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರದ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ.7 ವಾರ್ಡುಗಳಿಗೆ ತೆರಳಿ ಚುನಾವಣಾ ಪ್ರಚಾರವನ್ನ ಬಿಜೆಪಿ ಆಭ್ಯರ್ಥಿ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಎಸ್ ರಘು ಜಯಗಳಿಸಿದರು.ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ ಪ್ರಚಾರ ನಡೆಸುತ್ತಿದ್ದಾರೆ.ಈ ಬಾರಿ ಮತ್ತೆ ಬಿಜೆಪಿ ಗೆಲುವು ಎಂದು ಕಾರಗಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.