Webdunia - Bharat's app for daily news and videos

Install App

ಕ್ಷಮೆ ಕೇಳುವ ಸೌಜನ್ಯ ಡಿಕೆಶಿ, ಸಿದ್ದುಗಿಲ್ಲ- ಈಶ್ವರಪ್ಪ..!

Webdunia
ಶುಕ್ರವಾರ, 19 ಆಗಸ್ಟ್ 2022 (18:12 IST)
ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದ್ದಾರೆ. ನಾವು ತಪ್ಪು ಮಾಡಿದರೆ ಅವರು ತಿದ್ದುವ ಪ್ರಯತ್ನ ಮಾಡಬೇಕು. ಅವರು ತಪ್ಪು ಮಾಡಿದರೆ ಅವರಿಗೆ ನಾವು ಹೇಳುವ ಪ್ರಯತ್ನ ಮಾಡ್ತೇವೆ, ಇದೇ ರಾಜಕಾರಣ ಎಂದರು. ಈ ಬಗ್ಗೆ ಸಿಎಂ ಹಾಗೂ ಯಡಿಯೂರಪ್ಪ ಈ ರೀತಿ ಮಾಡಬೇಡಿ ಅಂತಾ ಹೇಳಿದ್ದಾರೆ. ಹೀಗಾಗಿ ನಾನೇನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ರಾಜಕಾರಣ ಅಂದ ಮೇಲೆ ಟ್ವೀಟ್ ವಾರ್ ನಡೆಯುತ್ತದೆ. ಎದುರೆದುರು ಟೀಕೆ ಮಾಡಿಕೊಳ್ಳುತ್ತೇವೆ.
ಒಬ್ಬರಿಗೊಬ್ಬರು ಹೊಗಳಿಕೊಳ್ಳಲು ರಾಜಕಾರಣ ಅಂದ್ರೆ ಏನು? ನಾವು ಅವರಿಗೆ ಬೈಯುವುದು, ಅವರು ನಮಗೆ ಬೈಯುವುದು ಇದೇ ರಾಜಕಾರಣ. ನಾವು ಮಾಡಿದ ಕೆಲಸವನ್ನೆಲ್ಲಾ ಹೊಗಳುತ್ತಾರಾ ಅವರು. ಅವರು ಮಾಡಿದ ಕೆಲಸವನ್ನೆಲ್ಲಾ ನಾವು ಹೊಗಳಿದ್ದೇವಾ....? ಆಡಳಿತ ದೃಷ್ಟಿಯಿಂದ ಒಳ್ಳೆಯದನ್ನ ಟೀಕಿಸಿದರೆ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಂಡ ಸಾವರ್ಕರ್ ಪೋಟೋ ಹರಿದು ಹಾಕಿರೋದು ನೇರವಾಗಿ ಕಾಣ್ತಿದೆ. ಇದು ಗೊತ್ತಿದ್ದರೂ ಒಂದು ಕ್ಷಮೆ ಕೇಳುವ ಸೌಜನ್ಯ ಡಿಕೆಶಿ, ಸಿದ್ದರಾಮಯ್ಯ ಅವರಿಗಿಲ್ಲ ಎಂದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments