Select Your Language

Notifications

webdunia
webdunia
webdunia
webdunia

ಅರ್ಜುನ್ ಸರ್ಜಾ-ಶೃತಿ ಹರಿಹರನ್ ಭವಿಷ್ಯ ಇಂದು ನಿರ್ಧಾರ

ಅರ್ಜುನ್ ಸರ್ಜಾ-ಶೃತಿ ಹರಿಹರನ್ ಭವಿಷ್ಯ ಇಂದು ನಿರ್ಧಾರ
ಬೆಂಗಳೂರು , ಮಂಗಳವಾರ, 30 ಅಕ್ಟೋಬರ್ 2018 (09:39 IST)
ಬೆಂಗಳೂರು: ವಿಸ್ಮಯ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಜತೆಗೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂಬ ನಟಿ ಶೃತಿ ಹರಿಹರನ್  ಪ್ರಕರಣಕ್ಕೆ ಇಂದು ಟ್ವಿಸ್ಟ್ ಸಿಗಲಿದೆ.

ಶೃತಿ ವಿರುದ್ಧ  5 ಕೋಟಿ ರೂ.ಗಳ ಮಾನಹಾನಿ ಮತ್ತು ಸಾರ್ವಜನಿಕ ಹೇಳಿಕೆ ನೀಡದಂತೆ ನಿರ್ಬಂಧ ಹೇರುವಂತೆ ಕೋರಿ ಅರ್ಜುನ್ ಸರ್ಜಾ ಪರ ಅಳಿಯ ಧ್ರುವ ಸರ್ಜಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿದೆ.

ಸೋಮವಾರ ಮೇಯೋಹಾಲ್ ನ ಎಸಿಸಿಎಂಎಂ ನ್ಯಾಯಾಲಯಕ್ಕೆ 14 ಪುಟಗಳ ವಾದ ಮಂಡಿಸಿದ್ದ ಶೃತಿ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಈ ಪ್ರಕರಣ ಸಂಬಂಧ ಅನೇಕ ಬೆದರಿಕೆ ಕರೆಗಳು, ಅವಹೇಳನಕಾರಿ ಪೋಸ್ಟ್ ಗಳು ಬರುತ್ತಿವೆ ಎಂದಿದ್ದಾರೆ. ಈ ನಡುವೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನಿಡಿದ ಶೃತಿ ಪರ ವಕೀಲರು ಅರ್ಜುನ್ ಸರ್ಜಾರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂನಿಂದ ಲಕ್ಷಾಂತರ ಹಣ ದೋಚಲು ಈ ಖದೀಮರು ಮಾಡಿದ್ದೇನು ಗೊತ್ತಾ?!