Publish Date: Mon, 22 Jan 2024 (14:22 IST)
Updated Date: Mon, 22 Jan 2024 (13:06 IST)
ಬೆಂಗಳೂರು-ದೇಶದೆಲ್ಲಡೆ ಕೇಸರಿ ಕಲರವ ಎಲೆಲ್ಲೂ ರಾಮ್ ನಾಮ ಜಪ ಹಬ್ಬದ ಸಂಭ್ರಮ ಮನಮಾಡಿದೆ.ಸಿಲಿಕಾನ್ ಸಿಟಿಯಲ್ಲಿ ಕೇಸರಿ ಕಲರವ ಕಳೆಗಟ್ಟಿದೆ.ಮೈಸೂರ್ ಬ್ಯಾಂಕ್ ವೃತ್ತದಲ್ಲಿರುವ ಆಂಜೆನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.ನಾನಾ ಹೂಗಳಿಂದ ದೇವಸ್ಥಾನ ಅಲಂಕಾರ ಗೊಳಿಸಲಾಗಿದೆ.ಹೋಮ ಹವನಕ್ಕೆ ಬರದ ಸಿದ್ಧತೆ ನಡೆದಿದೆ.ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂದಿದೆ.
ಮೈಸೂರ್ ಬ್ಯಾಂಕ್ ವೃತ್ತದಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ.ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಇಪ್ಪತ್ತು ಅಡಿ ಎತ್ತರದ ರಾಮನ ಪ್ರತಿಮೆ ಇದ್ದು,ಭಜನೆ ಕಾರ್ಯಕ್ರಮ ಕೂಡ ನಡೆಸಲಾಗುತ್ತಿದೆ .ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪುಟ್ಟ ರಾಮ್ ಸೀತೆ ಬಂದಿದ್ದಾರೆ.ಎಲ್ಲೆಲ್ಲೂ ಹಬ್ಬದ ಸಂಭ್ರಮ ಮೂಡಿದೆ.ಐತಿಹಾಸಿಕ ದಿನಕ್ಕಾಗಿ ಜನರು ಕಾಯುತ್ತಿದ್ದರು.ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ಮಾಜಿ ಮಾಜಿ ಶಾಸಕ ಆರ್, ವಿ ದೇವರಾಜ್ ದರ್ಶನ ಪಡೆದ್ರು.