Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹಿನ್ನಲೆ; ಈ ಗ್ರಾಮಕ್ಕೆ ಕಾಲಿಟ್ಟವರು ದಂಡ ಕಟ್ಟಬೇಕಂತೆ

ಕೊರೊನಾ ಭೀತಿ ಹಿನ್ನಲೆ; ಈ ಗ್ರಾಮಕ್ಕೆ ಕಾಲಿಟ್ಟವರು ದಂಡ ಕಟ್ಟಬೇಕಂತೆ
ಹುಬ್ಬಳ್ಳಿ , ಭಾನುವಾರ, 29 ಮಾರ್ಚ್ 2020 (11:11 IST)
ಹುಬ್ಬಳ್ಳಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಗ್ರಾಮದೊಳಗೆ ಯಾರಾದರೂ ಬಂದರೆ ದಂಡ ವಿಧಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ನಡುವೆ ಕೊರೊನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದ್ದು, ಇದರಿಂದ ಪಾರಾಗಲು ಕೆಲವು ಗ್ರಾಮಸ್ಥರು ಇಡೀ ಗ್ರಾಮಕ್ಕೆ ಬೇಲಿ ಹಾಕಿದ್ದರು.

 

ಆದರೆ  ಹುಬ್ಬಳ್ಳಿಯ ಗೋಕುಲ ಗ್ರಾಮದಲ್ಲಿ ಗ್ರಾಮದೊಳಗೆ ಯಾರಾದರೂ ಬಂದರೆ ದಂಡ ವಿಧಿಸುವುದಾಗಿ ಗ್ರಾಮಸ್ಥರು ಡಂಗುರ ಸಾರಿ ಎಚ್ಚರಿಕೆ ನೀಡುತ್ತಿದ್ದಾರೆ. ಅದರಲ್ಲೂ ಸಂಬಂಧಿಕರನ್ನು ಕರೆಸಿಕೊಂಡರೂ 5 ಸಾವಿರ ರೂ. ದಂಡ ಹಾಕುವುದಾಗಿ ಹೇಳಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗೋವಾದಲ್ಲಿ ಗದಗ , ಕೊಪ್ಪಳ ಜಿಲ್ಲೆ ಕಾರ್ಮಿಕರ ಪರದಾಟ