ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ

Webdunia
ಬುಧವಾರ, 12 ಅಕ್ಟೋಬರ್ 2022 (20:39 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಾಡಿದ್ದು, ಈ ಪೈಕಿ ಇಂದು ಮಹದೇವಪುರ ವಿಭಾಗದ ಹೂಡಿ, ಟಿಝಡ್ ಅಪಾರ್ಟ್ಮ್ಂಟ್ ಹಾಗೂ ಕೆ.ಆರ್.ಪುರ ವಿಭಾಗದ ಗಾಯತ್ರಿ ಲೇಔಟ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
 
ಮಹದೇವಪುರ ವಿಭಾಗ ವೈಟ್ ಫೀಲ್ಡ್ ಉಪ ವಿಭಾಗದಲ್ಲಿ ಬರುವ ಟಿ.ಝಡ್ ಅಪಾರ್ಟ್ಮ್ಂಟ್ ನ 70 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ ಭದ್ರತಾ ಸಿಬ್ಬಂದಿಯ ಕೊಠಡಿಯನ್ನು ತೆರವುಗೊಳಿಸಲಾಗಿದೆ. 
 
ಹೂಡಿ ಉಪ ವಿಭಾಗದ ದಿಯಾ ಸ್ಕೂಲ್ ಕಾಂಪೌಂಡ್ ಗೋಡೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಾಗಿದ್ದ ಮಳೆ ನೀರುಗಾಲುವೆಯ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಅದರಂತೆ, ದಿಯಾ ಸ್ಕೂಲ್ ನ 25 ಮೀಟರ್ ಉದ್ದದ ಕಾಂಪೌಂಡ್ ಗೋಡೆ, ದಿಯಾ ಸ್ಕೂಲ್ ನ ಹತ್ತಿರವಿದ್ದ 3 ಶೆಡ್(1 ಫಿಶ್ ಸ್ಟಾಲ್, 2 ಗ್ಯಾರೇಜ್ ಶೆಡ್)ಗಳ ಮುಂಭಾಗದ ಗೋಡೆಯ ಭಾಗವನ್ನು ತೆರವುಗೊಳಿಸಲಾಗಿದೆ. 
 
ವೈಟ್ ಫೀಲ್ಡ್ ರಿಂಗ್ ರಸ್ತೆ ಬದಿಯಿರುವ ಬಗಿನಿ ಹೋಟೆಲ್ ಮುಂಭಾಗದ ರಾಜಣ್ಣ ಗೌಡ್ರು ಹೋಟೆಲ್ 8 X 15 ಮೀಟರ್ ನ ಗೋಡೆಯನ್ನು ತೆರವುಗೊಳಿಸಲಾಗಿದೆ. ಇನ್ನು ಬಗಿನಿ ಹೋಟೆಲ್ ನಿಂದಲೂ ಒತ್ತುವರಿಯಾಗಿದ್ದು, ಒತ್ತುವರಿಯ ಭಾಗದಲ್ಲಿ ಗ್ಲಾಸ್ ಅಳವಡಿಸಿದ್ದು, ಬಗಿನಿ ಹೋಟೆಲ್ ನವರೇ ಸ್ವತಹ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬಂಧ ಕೂಡಲೆ ತೆರವುಗೊಳಿಸಲು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿರುತ್ತಾರೆ. ವೈಟ್ ಫೀಲ್ಡ್ ರಿಂಗ್ ರಸ್ತೆಯ ಮತ್ತೊಂದು ಭಾಗದಲ್ಲಿ ಸುಮಾರು 20 ಅಡಿ ಜಾಗದಲ್ಲಿದ್ದು ಶೀಟಿನ 2 ಶೆಡ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. 
 
ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಗಾಯಿತ್ರಿ ಲೇಔಟ್ ನಲ್ಲಿ ಇಂದು ಕೂಡಾ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಸುಮಾರು 60 ಮೀಟರ್ ಉದ್ದದ ನೀರು ಗಾಲುವೆಯ ಸ್ಥಳದಲ್ಲಿ ನಿರ್ಮಿಸಿದ್ದ 6 ಆರ್.ಸಿ.ಸಿ ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. 
 
ಮೊದಲಿಗೆ, 3 ಅಂತಸ್ತಿನ ವಸತಿ ಕಟ್ಟಡ(G + 3)ದ ನೆಲಮಹಡಿಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಉಳಿದ ಮೇಲ್ಬಾಗದ ಗೋಡೆಯನ್ನು ಸಿಬ್ಬಂದಿಗಳ ಮೂಲಕ ತೆರವುಗೊಳಸಲಾಗುತ್ತದೆ. ಇನ್ನುಳಿದ 5 ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆ ಭಾಗವನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ವೇಳೆ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಾರ್ಷಲ್‌ಗಳು ಉಪಸ್ಥಿತರಿದ್ದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿಲ್ಲಾ ಕಾರಾಗೃಹದಲ್ಲಿ ಜೆಡಿಎಸ್‌, ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ನಿಖಿಲ್‌ ಕುಮಾರಸ್ವಾಮಿ

ಜರ್ಮನಿಯ ಸ್ಟೇಡ್ ನಗರದಲ್ಲಿ ಗುಂಡಿನ ದಾಳಿ, ಐದು ಮಂದಿ ಸಾವು

ಭಾರೀ ಜನದಟ್ಟಣೆ: ಅಹಮದಾಬಾದ್ - ಮಂಗಳೂರು ಸಾಪ್ತಾಹಿಕ ವಿಶೇಷ ರೈಲು ಆಗಸ್ಟ್ 1 ರವರೆಗೆ ವಿಸ್ತರಣೆ

ಮದ್ಯ ಸೇವಿಸಿ ಟಾರ್ಚರ್ ನೀಡುತ್ತಾನೆಂದು ಪತಿ ಮಲಗಿದ್ದಾಗ ಪತ್ನಿ ಹೀಗೆ ಮಾಡುವುದಾ

ಮುಂಬೈನಲ್ಲಿ ಭಾರೀ ಮಳೆ: ನಗರ, ನೆರೆಯ ಪ್ರದೇಶಗಳಿಗೆ ಆರೆಂಜ್ ಅಲರ್ಟ್‌, Video

ಮುಂದಿನ ಸುದ್ದಿ
Show comments