Publish Date: Mon, 18 Feb 2019 (15:26 IST)
Updated Date: Mon, 18 Feb 2019 (15:28 IST)
ರಾಮಮಂದಿರ ವಿಚಾರ ಕೇವಲ ಚುನಾವಾಣಾ ಅಸ್ತ್ರವಾಗಬಾರದು. ಕಾಂಗ್ರೆಸ್ ನವರು ರಾಮಮಂದಿರ ವಿಚಾರದಲ್ಲಿ ವಿರೋಧಿಸಲ್ಲ ಎಂದು ಉಡುಪಿಯ ಪೇಜಾವರ ಶ್ರೀ ಹೇಳಿದ್ದಾರೆ.
ಹಾವೇರಿಯಲ್ಲಿ ಮಾನತಾಡಿದ ಅವರು, ಅವರು ಯಾವುದೋ ಪಕ್ಷದ ನೆರಳಿನಲ್ಲಿ ಮಾತನಾಡುತ್ತಾರೆ ರಾಮಮಂದಿರ ನಿರ್ಮಾಣ ವಿಚಾರವನ್ನು ಎಂದ ಅವರು, ನಮ್ಮ ಮಠ ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಭಾಗಿಯಾಗಲ್ಲ.
ರಾಮಮಂದಿರ ನಿರ್ಮಾಣ ಎಲ್ಲರಿಂದಲೂ ಸಾಧ್ಯವಿದೆ. ಕೇವಲ ಬಿಜೆಪಿಯಿಂದ ಮಾತ್ರವಲ್ಲ ಎಂದರು.
ಕಾಂಗ್ರೆಸ್ ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಲ್ಲ ಎಂದು ಪೇಜಾವರ ಶ್ರೀ ಹಾವೇರಿಯಲ್ಲಿ ಹೇಳಿಕೆ ನೀಡಿದ್ದಾರೆ.
ನಾವು ಚುನಾವಣೆ ಮುಂದೆ ಇರುವಂತೆ ರಾಮಮಂದಿರ ವಿಚಾರವನ್ನು ಎತ್ತಲ್ಲ ಎಂದಿರುವ ಅವರು, ಹಿಂದೂ ಧರ್ಮಕ್ಕೆ ಅನ್ಯಾಯ ವಾಗಬಾರದು. ರಾಮಂದಿರ ಕಟ್ಟುವುದರಿಂದ ಯಾವ ಮುಸ್ಲಿಂಗೂ ಹಾನಿ ಇಲ್ಲ ಎಂದಿದ್ದಾರೆ.