Webdunia - Bharat's app for daily news and videos

Install App

ಕಾಂಗ್ರೆಸ್​ಗೆ ರಿವರ್ಸ್​​ ಆಪರೇಷನ್​ ಭೀತಿ

Webdunia
ಸೋಮವಾರ, 3 ಏಪ್ರಿಲ್ 2023 (20:43 IST)
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ಈ ಹಿನ್ನೆಲೆಯಲ್ಲಿ ಟಿಕೆಟ್​ ಸಿಗದ ಆಕಾಂಕ್ಷಿಗಳು ಟಿಕೆಟ್​ ಸಿಗುವ ಪಕ್ಷಕ್ಕೆ ಜಂಪ್​ ಮಾಡ್ತಿದ್ದಾರೆ. BJP ಆಪರೇಷನ್​​​​​ ಕಮಲ ಮಾಡಿ ರಾಜ್ಯಾದ್ಯಂತ ಆಪರೇಷನ್ ಸ್ಪೆಷಲಿಸ್ಟ್​ ಆಗಿದೆ. ಇದೀಗ BJP ರಿವರ್ಸ್​ ಆಪರೇಷನ್​ ಮಾಡಿ ಮತ್ತೆ ಕಾಂಗ್ರೆಸ್​ಗೆ ಶಾಕ್​ ಕೊಡಲು ಮುಂದಾಗಿದೆ.. ಮಾಜಿ ಶಾಸಕ B.H. ಬನ್ನಿಕೋಡಗೆ BJP ಗಾಳ ಹಾಕಿದೆ. ಬಣಕಾರ್​ಗೆ ಹಿರೇಕೆರೂರು ಕಾಂಗ್ರೆಸ್​ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಬನ್ನಿಕೋಡ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬನ್ನಿಕೋಡ ಅವರನ್ನು ಬಿಜೆಪಿಗೆ ಕರೆತರಲು B.C.ಪಾಟೀಲ್​ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಸಚಿವ B.C.ಪಾಟೀಲ್​ ಬನ್ನಿಕೋಡ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ರಿವರ್ಸ್​ ಭೀತಿ ಶುರುವಾಗಿದೆ. ಬಳಿಕ ಹಿರೇಕೆರೂರಿನಲ್ಲಿ ಮಾತನಾಡಿದ ಸಚಿವ B.C.ಪಾಟೀಲ್​​, ಬನ್ನಿಕೋಡ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದಾರೆ, 2018ರಲ್ಲಿ ಒಟ್ಟಿಗೆ ಕಾಂಗ್ರೆಸ್​​ನಿಂದ ಚುನಾವಣೆ ಎದುರಿಸಿದ್ವಿ, ನಾನು ಪಕ್ಷ ಬಿಟ್ಟು ಬರುವಾಗ ಕರೆದಿದ್ದೆ ಅವರು ಬರಲಿಲ್ಲ. ತಾಲೂಕಿನ‌ ಅಭಿವೃದ್ಧಿಗೆ ಕೈ‌ಜೋಡಿಸಿ ಚುನಾವಣೆ ಮಾಡೋಣ, ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕೇಳಿಕೊಂಡಿದ್ದೇನೆ, ಪಕ್ಷಕ್ಕೆ ಬರುತ್ತಾರೆ ಎಂದು ಆಶಾದಾಯಕವಾಗಿದ್ದೇನೆ ಎಂದು B.C. ಪಾಟೀಲ್​​ ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments