Select Your Language

Notifications

webdunia
webdunia
webdunia
webdunia

‘ಮೀಸಲಾತಿಯನ್ನು ‘ಕೈ’​​​ ಪ್ರಚಾರಕ್ಕೆ ಬಳಸ್ತಿದೆ’

‘ಮೀಸಲಾತಿಯನ್ನು ‘ಕೈ’​​​ ಪ್ರಚಾರಕ್ಕೆ ಬಳಸ್ತಿದೆ’
bangalore , ಸೋಮವಾರ, 3 ಏಪ್ರಿಲ್ 2023 (19:50 IST)
ಒಳ ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಬಂಜಾರ ಸಮುದಾಯ BJP ಸರ್ಕಾರದ ವಿರುದ್ಧ ಭುಗಿಲೆದ್ದಿತ್ತು.. ಈ ಕುರಿತು ಬೆಂಗಳೂರಿನಲ್ಲಿ ಸಿಎಂ ಬಸವರಾಜ​ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯವನ್ನು ನಾವು ಕರೆದು ಮಾತಾಡ್ತಿದ್ದೇವೆ.. ಬಂಜಾರ, ಭೋವಿ, ಕೊರಮ, ಕೊರಚ ಈ ನಾಲ್ಕನ್ನು SCಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ, ಸದಾಶಿವ ಆಯೋಗದ ವರದಿ ಬಿಟ್ಟು, ಸಚಿವ ಸಂಪುಟ ಉಪ ಸಮಿತಿ ಪ್ರಕಾರ ಇದನ್ನು ಮಾಡಿದ್ದೇವೆ. ಅವರಿಗೆ ಮೀಸಲಾತಿ ಪ್ರಮಾಣ ಕೂಡ ಜಾಸ್ತಿಯಾಗಿದೆ ಎಂದು ತಿಳಿಸಿದ್ರು.. ಇದರ ಬಗ್ಗೆ ಬೇರೆ-ಬೇರೆಯವರು ಅಪ ಪ್ರಚಾರ ಮಾಡ್ತಿದ್ದಾರೆ.. ಕಾಂಗ್ರೆಸ್ ನೇತಾರರು ಎಲ್ಲೆಲ್ಲಿ ಸ್ಪರ್ಧೆ ಮಾಡ್ತಾರೆ, ಅಲ್ಲಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.. ಆದರೆ ಇದನ್ನು ನಾವು ರಾಜಕೀಯವಾಗಿ ಫೈಟ್ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ದಡೇಸುಗೂರಿಗೆ ಟಿಕೆಟ್​ ಮಿಸ್​?