Select Your Language

Notifications

webdunia
webdunia
webdunia
webdunia

MLC ಸ್ಥಾನಕ್ಕೆ ಆಯನೂರು ರಾಜೀನಾಮೆ

MLC ಸ್ಥಾನಕ್ಕೆ ಆಯನೂರು ರಾಜೀನಾಮೆ
ಶಿವಮೊಗ್ಗ , ಸೋಮವಾರ, 3 ಏಪ್ರಿಲ್ 2023 (19:00 IST)
ಬಿಜೆಪಿಯ ಹಿರಿಯ ನಾಯಕ ಆಯನೂರು ಮಂಜುನಾಥ್ MLC ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜತೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಮಾತನಾಡಿದ BJP ಬಂಡಾಯ ನಾಯಕ ಆಯನೂರು, ಶಾಸಕ K.S. ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದರು. ನೀವು ಎಲೆಕ್ಷನ್‌ಗೆ ನಿಲ್ಲಬಾರದು...ತಾಕತ್ತಿದ್ದರೆ ಮಗನನ್ನು ನಿಲ್ಲಿಸಿ ಗೆಲ್ಲಿಸಿ ಎಂದು K.S. ಈಶ್ವರಪ್ಪಗೆ ಸವಾಲು ಹಾಕಿದ್ರು.. ಯಾರೇ ನಿಂತರೂ ಅವರ ವಿರುದ್ಧ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದರು. ಆಯನೂರು ಮಂಜುನಾಥ್‌ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತವಾಗಿದೆ.. ಆದರೆ, ಅವರು ಯಾವುದಾದರೂ ಪಕ್ಷ ಸೇರಿ ಸ್ಪರ್ಧೆಗೆ ಇಳಿಯುತ್ತಾರೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಬಣ ರಾಜಕೀಯಕ್ಕೆ ಇಂದೇ ಬ್ರೇಕ್​​?