Select Your Language

Notifications

webdunia
webdunia
webdunia
webdunia

ಸರಕಾರ ನಡೆಸಲು ಬಿಜೆಪಿ ಬಿಡ್ತಿಲ್ಲ ಎಂದ ಕಾಂಗ್ರೆಸ್

ಸರಕಾರ ನಡೆಸಲು ಬಿಜೆಪಿ ಬಿಡ್ತಿಲ್ಲ ಎಂದ ಕಾಂಗ್ರೆಸ್
ಕಲಬುರಗಿ , ಬುಧವಾರ, 15 ಮೇ 2019 (15:22 IST)
ರಾಜ್ಯದಲ್ಲಿ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರುವ ಪಕ್ಷಗಳ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಾ ಸರಕಾರ ನಡೆಸಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ದೂರಿದೆ.

ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅಭಿವೃದ್ದಿ ಕೆಲಸ ಜಾರಿಗೆ ತರಲಾಗುತ್ತಿದೆ.  ಆದರೆ, ಸುಳ್ಳು ಹೇಳುವುದನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸರಕಾರದ ವಿರುದ್ದ ಅಪಪ್ರಚಾರ ಮಾಡುತ್ತಾ ಸರಕಾರ ನಡೆಸಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.  

ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿಯವರು ಏನೆಲ್ಲ ಅಡ್ಡಿಪಡಿಸಿದರೂ  ಸರಕಾರ ಸುಭದ್ರವಾಗಿದ್ದು ತನ್ನ ಅವಧಿ ಮುಗಿಸಲಿದೆ ಎಂದ್ರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಾಷ್ಟ್ರ ಹಾಗೂ ರಾಜ್ಯ ನಾಯಕರು ರಾಠೋಡ್ ಬೆನ್ನಿಗಿದ್ದೇವೆ. ಮಲ್ಲಿಕಾರ್ಜು‌ನ ಖರ್ಗೆ ಸಾಹೇಬರಂತಹ ರಾಷ್ಟ್ರಮಟ್ಟದ ನಾಯಕರ ಮಾರ್ಗದರ್ಶನ ಅವರಿಗಿದೆ.

ಹಾಗಾಗಿ ಜನಪರ ಹೋರಾಟಗಾರ ರಾಠೋಡ್ ಗೆಲ್ಲುತ್ತಾರೆ. ಜಾಧವ್ ಅವರ ಮಗ ಅವಿನಾಶ್ ಸೋಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಮನೆ ಮುಂದೆ ವಾಚಮನ್ ಆಗ್ತೀನಿ ಎಂದ ಜಮೀರ್