Select Your Language

Notifications

webdunia
webdunia
webdunia
webdunia

"ಸಲಗ" "ರಿಯಲ್ ಎಸ್ಟೇಟ್" ಚಿತ್ರತಂಡಗಳು ಪೊಲೀಸರಿಗೆ ನೀಡಿದ್ದ ದೂರು ಪ್ರತಿ ದೂರು ಸಂಧಾನದಲ್ಲಿ ಅಂತ್ಯ

bangalore , ಗುರುವಾರ, 21 ಅಕ್ಟೋಬರ್ 2021 (20:53 IST)
ಬೆಂಗಳೂರು: ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್​ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಲಗ ಮತ್ತು ರಿಯಲ್​ ಎಸ್ಟೇಟ್​ ಚಿತ್ರ ತಾಣದ ನಡುವೆ ಕಿತ್ತಾಟ ತಾರಕೇರಿತ್ತು. ಇದೀಗ  ದುನಿಯಾ ವಿಜಯ್​ ನಟನೆಯ ಸಲಗ ಚಿತ್ರ ತ್ರಿವೇಣಿ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದೇ ಥಿಯೇಟರ್​ನಲ್ಲಿ ರಿಯಲ್​ ಎಸ್ಟೇಟ್​ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ರಾಮಕೃಷ್ಣಪ್ಪ ಮುಂದಾಗಿದ್ದರು. ಆ ಕಾರಣಕ್ಕೆ ಎರಡೂ ಚಿತ್ರತಂಡಗಳ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಈ ಕುರಿತು ಬುಧವಾರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಲಾಗಿತ್ತು ಮತ್ತು ದೂರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ ಇಂದು ಉಭಯ ಚಿತ್ರ ತಂಡಗಳು ಪೋಲೀಸರ ಸಮ್ಮುಖದಲ್ಲಿ  ಕಾಂಪ್ರಮೈಸ್ ಮಾಡಿಕೊಂಡಿವೆ. 
 
ಪೊಲೀಸ್​ ಠಾಣೆಯಲ್ಲಿ ಸಂಧಾನ ಮಾಡಿಕೊಳ್ಳಲಾಗಿದ್ದು ಗಾಂಧಿನಗರದಲ್ಲಿ ಷಡ್ಯಂತ್ರ ಮಾಡುವವರಿಂದ ಈ ರೀತಿ ಸಮಸ್ಯೆ ಆಯಿತು ಎಂದು ಎರಡೂ ಚಿತ್ರತಂಡದವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್​ ಹೀರೋ ಆಗುತ್ತಿರುವ ರಾಮಕೃಷ್ಣಪ್ಪ ಅವರ ಮಗನಿಗೆ ಒಳ್ಳೆಯದಾಗಲಿ. ಗಾಂಧಿನಗರದಲ್ಲಿ ಕೆಲವರು ಷಡ್ಯಂತ್ರ ಮಾಡಿ ನಮ್ಮ ಮಧ್ಯೆ ತಂದಿಡುತ್ತಾರೆ ಹೇಳಿದ್ದಾರೆ. 
 
ನಾವಿಬ್ಬರು ಕಿತ್ತಾಡಿಕೊಂಡರೆ ಮೂರನೆಯವರು ಎಂಟ್ರಿ ನೀಡುತ್ತಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಯಾವುದೇ ಸಮಸ್ಯೆಯನ್ನು ಚಿಕ್ಕದಾಗಿರುವಾಗಲೇ ಪರಿಹರಿಸಿಕೊಳ್ಳಬೇಕು ಎಂದು ರಿಯಲ್​ ಎಸ್ಟೇಟ್​ ಚಿತ್ರದ ನಿರ್ಮಾಪಕ ರಾಮಕೃಷ್ಣಪ್ಪ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

10 ದ್ವಿಚಕ್ರ ವಾಹನಗಳು ಪೊಲೀಸ್ ವಶ ಕಳ್ಳನ ಬಂಧನ