Publish Date: Tue, 09 May 2023 (18:09 IST)
Updated Date: Tue, 09 May 2023 (19:12 IST)
ಜಯನಗರದ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ವಿರುದ್ಧ ಜಯನಗರದ ಶಾಸಕಿ ಸೌಮ್ಯರೆಡ್ಡಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೌಮ್ಯ ರೆಡ್ಡಿಗೆ ಸಾಥ್ ನೀಡಿದ್ದು,ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.ಕ್ಷೇತ್ರದ ಎಲ್ಲಾ ಪೊಲಿಂಗ್ ಬೂತ್ ಗಳಲ್ಲಿ ಜನರಲ್ಲಿ ಭಯ ಸೃಷ್ಟಿ ಮಾಡುತ್ತಿದ್ದಾರೆ.ಬಿಜೆಪಿಗೆ ಮತವನ್ನು ಹಾಕಿ ಎಂದು ಬೆದರಿಸುತ್ತಿದ್ದಾರೆ.ಗೂಂಡಾಗಳ ಮೂಲಕ ನಮಗೆ ಹೆಚ್ಚು ಮತ ಬರುವಂತ ಸ್ಥಳಿಗೆ ಕರೆಸಿ ಹೆದರಿಸುತ್ತಿದ್ದಾರೆ.ಕೂಡಲೇ ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಅಭ್ಯರ್ಥಿ ವಿರುದ್ದ ದೂರು ನೀಡಲಾಗಿದೆ.