Select Your Language

Notifications

webdunia
webdunia
webdunia
webdunia

ಬೆದರಿಕೆ ಹೆಚ್ಚಾದರೆ ಪೊಲೀಸ್ ಗೆ ದೂರು: ಕೇಮಾರು ಸ್ವಾಮೀಜಿ

ಬೆದರಿಕೆ ಹೆಚ್ಚಾದರೆ ಪೊಲೀಸ್ ಗೆ ದೂರು: ಕೇಮಾರು ಸ್ವಾಮೀಜಿ
ಉಡುಪಿ , ಬುಧವಾರ, 25 ಜುಲೈ 2018 (18:32 IST)
ಶೀರೂರು ಶ್ರೀ ನಿಗೂಢ ಸಾವು ಪ್ರಕರಣ ನಡೆಬೇಕೆಂದು ಹಾಗೂ ನಿಷ್ಪಕ್ಷಪಾತ ತನಿಖೆಗೆ ಉಡುಪಿ ಎಸ್ಪಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ. ನನಗೆ ಬೆದರಿಕೆ ಹೆಚ್ಚಾದರೆ ಪೊಲೀಸ್ ದೂರು ನೀಡುವೆ ಎಂದೂ ತಿಳಿಸಿದ್ದಾರೆ.

ಇತರ ಸ್ವಾಮೀಜಿಗಳ ಜೊತೆ ಸೇರಿ ನ್ಯಾಯಯುತ ತನಿಖೆಗೆ ಆಗ್ರಹ ಮಾಡಿರುವ ಕೇಮಾರು ಶ್ರೀಗಳು, ವೈದ್ಯರು ನೀಡಿದ ವರದಿ ಆಧಾರದಲ್ಲಿ ನಿಗೂಢ ಸಾವಿನ ತನಿಖೆಗೆ ಆಗ್ರಹ ಮಾಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್ ನಲ್ಲಿ ನನಗೆ ಬೆದರಿಕೆ, ಅಶ್ಲೀಲ ಸಂದೇಶ ಬಂದಿದೆ. ಹೀಗೆ ಬೆದರಿಕೆ ಹೆಚ್ಚಾದರೆ ಪೊಲೀಸ್ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ.

ಶೀರೂರು ಸ್ವಾಮೀಜಿ ಆತ್ಮ ಕಥನ ಬರೆಯಲು  ಮುಂದಾಗಿದ್ದರು. ಇದಕ್ಕಾಗಿ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ನಿಯೋಜನೆ ಮಾಡಿದ್ದರು ಎಂದು ಕೇಮಾರು  ಸ್ವಾಮೀಜಿ ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ: ಮತ್ತೆ ಗೋವಾ ಕ್ಯಾತೆ