Publish Date: Wed, 27 Mar 2019 (18:34 IST)
Updated Date: Wed, 27 Mar 2019 (18:36 IST)
ಪೇಡಾನಗರಿ ಖ್ಯಾತಿಯ ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕೈ ಪಾಳೆಯದಲ್ಲಿ ಟಿಕೆಟ್ ಗೆ ಭಾರೀ ಪೈಪೋಟಿ ನಡೆಯುತ್ತಿದೆ.
ಕಾಂಗ್ರೆಸ್ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ಹಾಗೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಕೆಟ್ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಕೈ ಪಾಳೆಯದ ರಾಜ್ಯ ಉಸ್ತುವಾರಿ ವೇಣುಗೋಪಾಲ ಮೇಲೆ ಒತ್ತಡ ತರಲಾಗುತ್ತಿದೆ.
ಇತ್ತ ನನಗೆ ಅಥವಾ ನಮ್ಮ ತಂದೆಗೆ ಟಿಕೆಟ್ ನೀಡಬೇಕೆಂದು ಶಾಕೀರ್ ಸನದಿ ಸಹ ಪಟ್ಟು ಹಿಡಿದಿದ್ದಾರೆ. ಇಂದು ರಾತ್ರಿ ಟಿಕೆಟ್ ಫೈನಲ್ ಆಗಲಿದೆ.