Select Your Language

Notifications

webdunia
webdunia
webdunia
webdunia

ಮಂಡ್ಯದ ರೈತರ ಕಣ್ಣೀರು ಒರೆಸಲು ಜೋಡೆತ್ತು ಈಗ ಬರಲಿ- ಶಿವರಾಮೇಗೌಡ ಟಾಂಗ್

ಮಂಡ್ಯದ ರೈತರ ಕಣ್ಣೀರು ಒರೆಸಲು ಜೋಡೆತ್ತು ಈಗ ಬರಲಿ- ಶಿವರಾಮೇಗೌಡ ಟಾಂಗ್
ಮಂಡ್ಯ , ಶನಿವಾರ, 28 ಸೆಪ್ಟಂಬರ್ 2019 (11:34 IST)
ಮಂಡ್ಯ : ಮಂಡ್ಯದ ರೈತರ ಕಣ್ಣೀರು ಒರೆಸಲು ಜೋಡೆತ್ತು ಈಗ ಬರಲಿ ಎಂದು ಮಂಡ್ಯದ ಜೋಡೆತ್ತುಗಳಿಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಟಾಂಗ್ ನೀಡಿದ್ದಾರೆ.



‘ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಕೈ ಬಿಡಬೇಡಿ ಅಂತ ಹೇಳಿದ್ವಿ. ಆದರೆ ಸ್ವಾಭಿಮಾನಕ್ಕೆ ಮತ ಕೊಡ್ಬೇಕು ಎಂದು ಸುಮಲತಾರನ್ನ ಗೆಲ್ಲಿಸಿದ್ರು. ರೈತರ ಕಬ್ಬು ಕಟಾವು ಆಗದೆ ಬೆಂಕಿ ಹಚ್ಚುವ ಸ್ಥಿತಿಗೆ ಬಂದಿದೆ. ಚುನಾವಣೆ ವೇಳೆ ಮಂಡ್ಯಕ್ಕೆ ಜೋಡೆತ್ತು ಬಂದಿದ್ವು, ನಾವಿದ್ದೇವೆ, ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ರು. ಸಮಸ್ಯೆ ಪರಿಹಾರಕ್ಕೆ ಸುಮಲತಾ ಮಂಡ್ಯದಲ್ಲಿರ್ತಾರೆ ಅಂದುಕೊಂಡಿದ್ವಿ. ರೈತರು ಸತ್ತರೂ ಇಲ್ಲ. ಬಾಯಿ ಬಡಿದುಕೊಂಡರೂ ಬರ್ತಿಲ್ಲ’ ಎಂದು ಶಿವರಾಮೇಗೌಡ ಕಿಡಿಕಾರಿದ್ದಾರೆ.

 

‘ಜೋಡೆತ್ತು ಹಾಗೂ ಸಂಸದರನ್ನ ಹುಡುಕಬೇಕಾದ ಪರಿಸ್ಥಿತಿ ಇದೆ. ಸುಮಲತಾ ರಾಜಕೀಯ ಸಾಕು ಸಮಸ್ಯೆ ಬಗೆಹರಿಸೋಣ ಎಂದಿದ್ರು. ಸಂಸದರೇ ಈಗ ಬನ್ನಿ ರೈತರ ಸಮಸ್ಯೆ ಬಗೆಹರಿಸೋಣ’ ಎಂದು ಅವರು ಟಾಂಗ್ ನೀಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಲಿಂಗಾಯುತ ನಾಯಕ ಬಿಎಸ್ ವೈನ ಮುಗಿಸಲು ಸಂಚು ಹೂಡಿದ್ದಾರೆ- ಆರ್.ಬಿ.ತಿಮ್ಮಾಪುರ