Select Your Language

Notifications

webdunia
webdunia
webdunia
webdunia

ಸಿಎಂ ಗ್ರಾಮವಾಸ್ತವ್ಯ ಮಾಡಿದ್ರೆ ನಮಗೂ ಲಾಭವಾಗುತ್ತೆ ಎಂದ ಈಶ್ವರ ಖಂಡ್ರೆ

ಸಿಎಂ ಗ್ರಾಮವಾಸ್ತವ್ಯ ಮಾಡಿದ್ರೆ ನಮಗೂ ಲಾಭವಾಗುತ್ತೆ ಎಂದ ಈಶ್ವರ ಖಂಡ್ರೆ
ಬೆಂಗಳೂರು , ಬುಧವಾರ, 26 ಜೂನ್ 2019 (11:59 IST)
ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಕ್ರೆಡಿಟ್ ನಮಗೆ ಸಿಗಲ್ಲ ಎಂಬ ಕೆಲವು ಕಾಂಗ್ರೆಸ್ ನಾಯಕರ ಆಕ್ಷೇಪಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.


ಸಿಎಂ ಗ್ರಾಮವಾಸ್ತವ್ಯ ಮಾಡುವುದರಿಂದ ಮೈತ್ರಿ ಪಕ್ಷವಾದ ಕಾಂಗ್ರೆಸ್ ಗೂ ಲಾಭವಾಗುತ್ತದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಗ್ರಾಮವಾಸ್ತವ್ಯದ ಕ್ರೆಡಿಟ್ ಕೇವಲ ಜೆಡಿಎಸ್ ಗೆ ಸಿಗುತ್ತದೆ ಎಂಬ ಅಸಮಾಧಾನಗಳಿಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಇನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮೈತ್ರಿಯೇ ಕಾರಣ ಎಂಬ ಹಿರಿಯ ಮುಖಂಡ ಮುನಿಯಪ್ಪ, ವೀರಪ್ಪ ಮೊಯಿಲಿ ಆರೋಪಗಳಿಗೆ ತಿರುಗೇಟು ನೀಡಿರುವ ಖಂಡ್ರೆ ಸೋಲಿಗೆ ಮೈತ್ರಿ ಕಾರಣವಲ್ಲ, ಬಿಜೆಪಿಯ ಅಪಪ್ರಚಾರ ಕಾರಣ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನಲ್ಲಿ ತೇಜಸ್ವಿ-ಪ್ರಜ್ವಲ್ ರೇವಣ್ಣ ಚಕಮಕಿ