Select Your Language

Notifications

webdunia
webdunia
webdunia
webdunia

ಪಿಸ್ತೂಲ್ ತೋರಿಸಿದ ಕಾಂಗ್ರೆಸ್ ಮುಖಂಡನ ಪುತ್ರ ಬೆದರಿಸಿ ಮಾಡಿದ್ದೇನು?

ಪಿಸ್ತೂಲ್ ತೋರಿಸಿದ ಕಾಂಗ್ರೆಸ್ ಮುಖಂಡನ ಪುತ್ರ ಬೆದರಿಸಿ ಮಾಡಿದ್ದೇನು?
ಕುಣಿಗಲ್ , ಭಾನುವಾರ, 23 ಜೂನ್ 2019 (19:13 IST)
ಪಿಸ್ತೂಲ್ ತೋರಿಸಿ ಬೆದರಿಸಿ ಮಾಡಬಾರದ ಕೆಲಸವನ್ನು ವ್ಯಕ್ತಿಯೊಬ್ಬ ಮಾಡಿದ್ದಾನೆ.

ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನು ಪಿಸ್ತೂಲ್ ತೋರಿಸಿ ಬೆದರಿಸಿರುವ ಘಟನೆ ನಡೆದಿದೆ.

ಹೆರೂರು ಗ್ರಾಮದ ಕಾಂಗ್ರೆಸ್ ಮುಖಂಡ ಪುಟ್ಟರೇವಣ್ಣ ಎನ್ನುವವರ ಪುತ್ರ ಮಂಜುನಾಥ್ ಎಂಬಾತನೇ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ವ್ಯಕ್ತಿಯಾಗಿದ್ದಾನೆ.

ಪುಟ್ಟರೇವಣ್ಣನ ಸಹೋದರ ಸಂಬಂಧಿಗಳಾದ ಚಿಕ್ಕರೇವಣ್ಣ, ದೊಡ್ಡ ರೇವಣ್ಣ ಇವರ ನಡುವೆ ಜಮೀನು ವಿವಾದ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಆಗಾಗ ಜಗಳ ಕೂಡ ಆಡಿದ್ದಾರೆ.

ಜಮೀನು ವಿಷಯವಾಗಿ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಮಂಜುನಾಥ್ ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲಕಾಲ ಪರಸ್ಪರ ತಳ್ಳಾಟ, ನೂಕಾಟ ನಡೆಯಿತು ಎಂದು ಅಲ್ಲಿನ ಜನರು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರ ಭವಿಷ್ಯ ವರಿಷ್ಠರ ಕೈಯಲ್ಲಿ ಅಂತ ಡಿಸಿಎಂ ಹೇಳಿದ್ಯಾಕೆ?