Select Your Language

Notifications

webdunia
webdunia
webdunia
webdunia

ಫೈಟ್, ಕುಸ್ತಿ ಎಲ್ಲಾ ಏನೂ ಇಲ್ರೀ.. ನಾವೇ ಗೆಲ್ಲೋದು ಎಂದ ಸಿಎಂ ಸಿದ್ದರಾಮಯ್ಯ

ಫೈಟ್, ಕುಸ್ತಿ ಎಲ್ಲಾ ಏನೂ ಇಲ್ರೀ.. ನಾವೇ ಗೆಲ್ಲೋದು ಎಂದ ಸಿಎಂ ಸಿದ್ದರಾಮಯ್ಯ
ಮೈಸೂರು , ಭಾನುವಾರ, 1 ಏಪ್ರಿಲ್ 2018 (05:58 IST)
ಮೈಸೂರು: ನಿನ್ನೆಯಿಡೀ ತಮ್ಮ ತವರು ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ತಮಗೆ ಎದುರಾಳಿ ಯಾರೂ ಇಲ್ಲ, ತಾವೇ ಗೆಲ್ಲೋದು ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟೈಟ್ ಫೈಟ್ ಬಗ್ಗೆ ಕೇಳಿದಾಗ ಸಿಎಂ ಸಿದ್ದರಾಮಯ್ಯ ‘ಫೈಟ್ ಗೈಟ್ ಎನ್ನಕ್ಕೆ ಇದೇನು ಕುಸ್ತಿ ಅಖಾಡನಾ? ಇಲ್ಲಿ ನಾವೇ ಗೆಲ್ಲೋದು. ಜನರ ಪ್ರೀತಿ ನಮ್ಮ ಮೇಲಿದೆ’ ಎಂದಿದ್ದಾರೆ.

ಪುತ್ರ ಯತೀಂದ್ರ ಜತೆಗೆ ತಮ್ಮ ಸ್ವ ಕ್ಷೇತ್ರದ ತುಂಬಾ ಓಡಾಡಿದ ಸಿಎಂ ಸಿದ್ದರಾಮಯ್ಯ ಭಾರೀ ಮತ ಪ್ರಚಾರ ನಡೆಸಿದರು. ಈ ವೇಳೆ ಅವರಿಗೆ ತವರಿನ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕಕ್ಕೆ ಬಂದರೂ ನಿಷ್ಠೆ ತಪ್ಪದ ಅಮಿತ್ ಶಾ