Select Your Language

Notifications

webdunia
webdunia
webdunia
webdunia

ಮೋದಿದು ಮನ್ ಕೀ ಬಾತ್, ನಮ್ದು ಕಾಮ್ ಕೀ ಬಾತ್: ಸಿಎಂ ವಾಗ್ದಾಳಿ

ಮೋದಿದು ಮನ್ ಕೀ ಬಾತ್, ನಮ್ದು ಕಾಮ್ ಕೀ ಬಾತ್: ಸಿಎಂ ವಾಗ್ದಾಳಿ
ಬೆಂಗಳೂರು: , ಶನಿವಾರ, 23 ಸೆಪ್ಟಂಬರ್ 2017 (13:58 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಮ್ಮದು ಕಾಮ್ ಕೀ ಬಾತ್ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೇಳಿಕೊಳ್ಳೋಕೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳುತ್ತಾರೆ. ಆದರೆ, ನಿಜವಾಗಿ  ಬಂಡವಾಳಶಾಹಿಗಳಿಗೆ ಮಾತ್ರ ಸಾಥ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
 
ನಿಜವಾದ ಅರ್ಥದಲ್ಲಿ ಎಲ್ಲರಿಗೂ ಸಾಥ್ ನೀಡಿದವರು ನಾವು. ರಾಜ್ಯದಲ್ಲಿ ಎಲ್ರಿಗೂ ಒಂದಾದ್ರೂ ಕಾರ್ಯಕ್ರಮ ನಾವು ನೀಡಿದ್ದೇವೆ. ಮೋದಿ ಸರಕಾರ ಏನು ಮಾಡಿದೆ ಎಂದು ಗುಡುಗಿದರು. 
 
ಕಳೆದ ವರ್ಷ ನೋಟ್ ಬ್ಯಾನ್ ಜಾರಿಗೊಳಿಸಿ ದೇಶದ ಆರ್ಥಿಕತೆಯನ್ನು ಅಲ್ಲೋಲ ಕಲ್ಲೋಲ ಮಾಡಿದರು. ಇವತ್ತು ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದು ಮೋದಿ ಸರಕಾರದ ಕೊಡುಗೆ ಎಂದು ವ್ಯಂಗ್ಯವಾಡಿದರು.
 
ರಾಜ್ಯದಲ್ಲಿ ರೈತರ ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮೋದಿ ಸರಕಾರ ಹಿಂದೇಟು ಹಾಕುತ್ತಿದೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದ ಸರಕಾರಕ್ಕೆ ರೈತರ ಸಾಲ ಹೊರೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧದಿಂದ ದೇಶದ ಆರ್ಥಿಕತೆ ಕುಸಿತದತ್ತ : ಮನಮೋಹನ್ ಸಿಂಗ್