Select Your Language

Notifications

webdunia
webdunia
webdunia
webdunia

ಸಿಎಂ ರೆಸಾರ್ಟ್ ವಾಸ್ತವ್ಯ; ಸಚಿವ ಡಿ.ಕೆ.ಶಿವಕುಮಾರ ಹೀಗ್ಯಾಕೆ ಹೇಳಿದ್ರು?

ಸಿಎಂ ರೆಸಾರ್ಟ್ ವಾಸ್ತವ್ಯ; ಸಚಿವ ಡಿ.ಕೆ.ಶಿವಕುಮಾರ ಹೀಗ್ಯಾಕೆ ಹೇಳಿದ್ರು?
ಬೆಂಗಳೂರು , ಭಾನುವಾರ, 12 ಮೇ 2019 (14:23 IST)
ಬಿಜೆಪಿ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವ ತಿರುಗೇಟು ನೀಡಿದ್ದಾರೆ.

ಸಚಿವ  ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದು, ನಾನು ಯಾವ ಪೇಪರ್ರೂ ಅಲ್ಲ, ಟೈಗರ್ರೂ ಅಲ್ಲ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದಿದ್ದಾರೆ. ಡಿಕೆಶಿ ಪೇಪರ್ ಟೈಗರ್ ಅಂತ ಜಗದೀಶ್ ಶೆಟ್ಟರ್ ಟೀಕೆ ಮಾಡಿದ್ರು.

ಇನ್ನು ಸಿಎಂ ಕುಮಾರಸ್ವಾಮಿಯವರ ರೆಸಾರ್ಟ್ ವಾಸ ಸಮರ್ಥನೆ ಮಾಡಿಕೊಂಡ ಡಿ‌.ಕೆ.ಶಿವಕುಮಾರ್, ಆರೋಗ್ಯದ ದೃಷ್ಟಿಯಿಂದ ಅವರು ವಿಶ್ರಾಂತಿಗೆ ಹೋಗಿದ್ದಾರೆ. ಹಗಲೂ ರಾತ್ರಿ ಚುನಾವಣೆಗೆ ಕೆಲಸ ಮಾಡಿದ್ದಾರೆ. ಹಾಗಾಗಿ ರೆಸಾರ್ಟ್ ಗೆ ಹೋಗಿದ್ದಾರೆ ಎಂದರು.

ನಿಮಗೆ ದಿನ ಬೆಳಗಾದರೆ ಸಿಎಂ ಅವರನ್ನು ಟೀಕೆ ಮಾಡುವುದೇ ಕೆಲಸವಾಗಿದೆ ಎಂದ ಅವರು, ಅವರು ಕ್ಯಾಬಿನೆಟ್ ಮೀಟಿಂಗ್ ಮಾಡಿದ್ದಾರೆ. ಏನು ಕೆಲಸ ಮಾಡಬೇಕೋ ಅದೆಲ್ಲ ಮಾಡ್ತಿದಾರೆ ಎಂದು ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ನಿತ್ಯ ಕನಸು ಕಾಣ್ತಿದ್ದಾರೆ; ಒಬ್ಬ ಶಾಸಕ ಅವ್ರ ಕೈಗೆ ಸಿಗಲ್ಲ