Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದವರ್ಯಾರು ಗೊತ್ತಾ?

ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದವರ್ಯಾರು ಗೊತ್ತಾ?
ಮಂಡ್ಯ , ಮಂಗಳವಾರ, 16 ಏಪ್ರಿಲ್ 2019 (09:33 IST)
ಮಂಡ್ಯ : ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್ ನಗರದ ಬಾಚನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಸಾವಿನ ಕುರಿತ ಸಿ.ಎಂ ನೂರಕ್ಕೆ ನೂರರಷ್ಟು ಸುಳ್ಳು ಹೇಳಿದರೆ, ನಾನು ಏನು ಮಾಡಲಿ. ಕುಮಾರಸ್ವಾಮಿ ಅವರು ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ. ಬಹುಶಃ ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಕುಟುಂಬ ಸದಸ್ಯರನ್ನ ಕಳೆದುಕೊಂಡ ನೋವು ಅವರಿಗೆ ಗೊತ್ತಿಲ್ಲ. ಅವರಿಗೆ ಬರುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಅವರು ಕುಟುಂಬ ರಾಜಕಾರಣ ಮಾಡ್ತಿರೋದ್ರಿಂದ ಅವರ ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಕ್ಕೆ ಸಿ.ಎಂ ಹಾಗೆ ಮಾತಾಡುತ್ತಿದ್ದಾರೆ. ಸಿಎಂ ಮಗನ ಪರ ಪ್ರಚಾರ ಮಾಡಲಿ. ನನ್ನಲ್ಲಿ ಲೋಪವಿದ್ದರೆ ಜನ ಹೇಳುತ್ತಾರೆ. ನಾನು ಸ್ಪರ್ಧೆ ಮಾಡ್ತಿರೋದು ನಿಖಿಲ್ ವಿರುದ್ಧವೋ ಅಥವಾ ಕುಮಾರಸ್ವಾಮಿ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಾವನೋ ಅವನು ಯಶ್? ರಾಕಿಂಗ್ ಸ್ಟಾರ್ ವಿರುದ್ಧ ಸಿಎಂ ಕುಮಾರಸ್ವಾಮಿ ಏಕವಚನದ ವಾಗ್ದಾಳಿ