Select Your Language

Notifications

webdunia
webdunia
webdunia
webdunia

Chinnaswamy stampede: ಬಿ ದಯಾನಂದ್ ಮೆಸೇಜ್ ಮಾಡಿದ್ರು: ಶಾಕಿಂಗ್ ಸತ್ಯ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ

B Dayanand message

Krishnaveni K

ಬೆಂಗಳೂರು , ಸೋಮವಾರ, 9 ಜೂನ್ 2025 (12:57 IST)
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಬಿ ದಯಾನಂದ್ ಅವರನ್ನು ಅಮಾನತು ಮಾಡಿರುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಾಕಿಂಗ್ ಸತ್ಯ ರಿವೀಲ್ ಮಾಡಿದ್ದಾರೆ.

ಕಮಿಷನರ್ ದಯಾನಂದ್ ಅಮಾನಾತದ ಮೇಲೆ ಅವರ ಎಂಥಾ ದಕ್ಷ ಅಧಿಕಾರಿಯಾಗಿದ್ದರು ಎಂಬ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ. ಪ್ರಾಮಾಣಿಕ ಅಧಿಕಾರಿಯಾಗಿದ್ದ ಬಿ ದಯಾನಂದ್ ಅವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವೂ ಕೇಳಿಬರುತ್ತಿದೆ. ಈ ನಡುವೆ ಪ್ರಲ್ಹಾದ್ ಜೋಶಿ ಹೊಸ ವಿಚಾರವೊಂದನ್ನು ಹೇಳಿದ್ದಾರೆ.

‘ನನಗೆ ಗೊತ್ತಿರುವ ಹಾಗೆ ಪ್ರತೀ ದಿನ ಬೆಳಿಗ್ಗೆ 7.30 ಕ್ಕೆ ನಗರ ಕಮಿಷನರ್ ಸಿಎಂ ಮತ್ತು ಡಿಸಿಎಂಗೆ ಆವತ್ತಿನ ಬ್ರೀಫಿಂಗ್ ಕೊಡಬೇಕು. ಆದರೆ ನಮ್ಮ ದೌರ್ಭಾಗ್ಯ ನೋಡಿ, ಆರ್ ಸಿಬಿ ಕಪ್ ಗೆದ್ದಿದೆ ಎಂದು ರಾತ್ರಿಯೆಲ್ಲಾ ಕುಡಿದು ಕುಣಿದು ಕುಪ್ಪಳಿಸಿದ್ದರಿಂದ ಅವರಿಗೆ ಭದ್ರತೆ ನೀಡಿ ಪೊಲೀಸರು ಸುಸ್ತಾಗಿದ್ರು. ಹೀಗಾಗಿ ಬೆಳಿಗ್ಗೆ ಮೀಟಿಂಗ್ ಗೆ ಬರಕ್ಕಾಗಲ್ಲ ಎಂದು ಬಿ ದಯಾನಂದ್ ಹೋಂ ಮಿನಿಸ್ಟ್ರಿಗೆ ಮೆಸೇಜ್ ಮಾಡಿದ್ರು. ಮುಂದೆ 8.30 ಕ್ಕೆ ಡಿಸಿಪಿ ಎಲ್ಲಾ ಅರೇಂಜ್ ಮಾಡಿದ್ದಾರೆ ಎಂದು. ಆಗ ಅವರು ಸಿಎಂಗೆ ಅರೇಂಜ್ ಮೆಂಟ್ ಮಾಡಬೇಡಿ ಎಂದು ಮಾಹಿತಿ ನೀಡಿದ್ದಾರೆ. ಈಗ ಇದಕ್ಕೆ ಯಾರು ಜವಾಬ್ಧಾರರು?

ಅಲ್ಲಾ ಕುಂಭಮೇಳಕ್ಕೆ ಇದನ್ನು ಹೋಗಿ ಹೋಲಿಸ್ತೀರಲ್ಲಾ? ಇಲ್ಲಿ ನಡೆದಿದ್ದು ನಿಮ್ಮ ಮೂರ್ಖತನದಿಂದ. ಅದಕ್ಕೂ ಇದಕ್ಕೂ ಎಲ್ಲಿಯ ಹೋಲಿಕೆ?’ ಎಂದಿದ್ದಾರೆ. ಇನ್ನು ಸರ್ಕಾರಕ್ಕೆ ಮುಜುಗರ ಆಗಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ದಪ್ಪ ಚರ್ಮದವರಿಗೆ ನಾಚಿಕೆಯೇ ಆಗಲ್ಲ. ಸೂಕ್ಷ್ಮ ಸಂವೇದಿಗಳಿಗೆ ಮಾತ್ರ ಅಗುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ ಬೆಳೆಗಾರರಿಗೆ ಶಾಕ್, ಇಂದಿನ ಬೆಲೆ ಎಷ್ಟಾಗಿದೆ ನೋಡಿ