Select Your Language

Notifications

webdunia
webdunia
webdunia
webdunia

ಕೇಂದ್ರ ಚುನಾವಣಾ ಆಯೋಗ ಸಭೆ

ಕೇಂದ್ರ ಚುನಾವಣಾ ಆಯೋಗ ಸಭೆ
bangalore , ಶನಿವಾರ, 11 ಮಾರ್ಚ್ 2023 (16:48 IST)
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನಿಹ ಹಿನ್ನೆಲೆ.ನಿನ್ನೆಂದಲೂ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಬಿಡು ಬಿಟ್ಟಿದೆ.ನಗರದ ವಿಕಾಸಸೌಧದಲ್ಲಿ ರಾಜ್ಯದ ಚುನಾವಣಾ ಅಧಿಕಾರಿಗಳ ಜೊತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿತು.ರಾಜ್ಯದಲ್ಲಿ ಚುನಾವಣಾ ನಡೆಸುವ ಸಂಬಂಧ ಪೂರ್ವ ಸಿದ್ದತಾ ಸಭೆ ಇದಾಗಿದ್ದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಅಧ್ಯಕ್ಷತೆಯಲ್ಲಿ ನಡೆಯಿತು. ಇನ್ನೂ ಈ ಸಭೆಯಲ್ಲಿ 34 ಜಿಲ್ಲಾ ಚುನಾವಣಾಧಿಕಾರಿಗಳು ಸಭೆಯಲ್ಲಿ ಭಾಗಿ ಆಗಿದ್ರು.ಸಭೆಯಲ್ಲಿ ಚುನಾವಣೆಯ ಪೂರ್ವ ತಯಾರಿಗಳು,ಜನರಿಗೆ ಮತದಾನ ಮಾಡುವ ಕುರಿತು ಜಾಗೃತಿ ಬಗ್ಗೆ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.ನಾಳೆ ಚುನಾವಣಾ ಸಿದ್ದತೆ ಕುರಿತು ಕೇಂದ್ರ ಚುನಾವಣಾ ಆಯೋಗ ಸುದ್ದಿಗೊಷ್ಠಿ ನಡೆಸಿ ಮಾಹಿತಿ ಕೊಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರಿಗೆ ಈಗಾಗಲೇ ಅವರಿಗೆ ೬೦ ಸ್ಥಾನಗಳ ಮೇಲೆ ಹೋಗೋದಿಲ್ಲ- ಬಿ ಕೆ ಹರಿಪ್ರಸಾದ್