Publish Date: Tue, 31 Jan 2023 (20:51 IST)
Updated Date: Tue, 31 Jan 2023 (20:55 IST)
KPCC ಅಧ್ಯಕ್ಷ D.K ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೊ ಬಿಡುಗಡೆ ಮಾಡಿದ್ರು. ಈ ಕುರಿತು ಮಾಜಿ ಸಿಎಂ H.D ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, CD ಕಥೆ ನನಗೆ ಬೇಡ, ನನಗೆ ಜನರ ಅಭಿವೃದ್ಧಿ ಮುಖ್ಯ. CD ಇದ್ದರೆ ಬಿಡುಗಡೆ ಮಾಡಲಿ.. ಅದನ್ನು CD ಎಕ್ಸ್ಪರ್ಟ್ಗಳು ರಿಲೀಸ್ ಮಾಡುತ್ತಾರೆ.
ಎರಡು ರಾಷ್ಟೀಯ ಪಕ್ಷಗಳಿಗೆ ನಾಡಿನ ಜನತೆಯ ಸಮಸ್ಯೆ ಬಗ್ಗೆ ಗಮನ ಇಲ್ಲ ಎಂದು ಕಿಡಿಕಾರಿದ್ರು. ಎರಡು ಪಕ್ಷಗಳ ಕಿತ್ತಾಟ ನೋಡಿ ಜನ ಬದಲಾವಣೆ ಬಯಸುತ್ತಿದ್ದಾರೆ. ರಾಷ್ಟೀಯ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದ್ರು. ಸಂಸದೆ ಸುಮಲತಾ ಯಾವ ಪಕ್ಷ ಸೇರ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಸುಮಲತಾ ಯಾವ ಪಕ್ಷಕ್ಕೆ ಹೋದರೆ ನನಗೇನು? ನಾನು ಅವರ ಬಗ್ಗೆ ಚರ್ಚೆ ಮಾಡಲ್ಲ ಎಂದು ತಿಳಿಸಿದ್ರು.