Select Your Language

Notifications

webdunia
webdunia
webdunia
webdunia

ಶಿವಾಜಿ ಬಗ್ಗೆ ಅವಹೇಳನ; ಬಾಲಕ ಅರೆಸ್ಟ್​​​

ಶಿವಾಜಿ ಬಗ್ಗೆ ಅವಹೇಳನ; ಬಾಲಕ ಅರೆಸ್ಟ್​​​
ವಿಜಯಪುರ , ಮಂಗಳವಾರ, 31 ಜನವರಿ 2023 (20:35 IST)
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಅಪ್ರಾಪ್ತ ಬಾಲಕನೋರ್ವ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧವಾಗುತ್ತಿದ್ದು, ಈ ಬೆನ್ನಲ್ಲೇ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೋಮವಾರ ರಾತ್ರಿ ತನ್ನ ವಾಟ್ಸಾಪ್ ಸ್ಟೇಟಸ್​​ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅಶ್ಲೀಲ ಪದ ಬಳಸಿ ನಿಂದನೆ ಮಾಡಿದ್ದ. ಇದು ಎಲ್ಲೆಡೆ ವೈರಲ್ ಅಗಿದ್ದು, ವಿಷಯ ತಿಳಿದು ಕುಪಿತರಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಚಡಚಣ ಪಟ್ಟಣದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪರಿಸ್ಥಿತಿ ಬಿಗಡಾಯಿಸುವುದನ್ನು ತಡೆಯಲು ಮುಂದಾಗಿರುವ ಚಡಚಣ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯುವೆಲ್ಲರಿ ಶಾಪ್​ ಮೇಲೆ IT ದಾಳಿ