Select Your Language

Notifications

webdunia
webdunia
webdunia
webdunia

ದಲ್ಲಾಳಿಗಳಿಂದ ಆಡಳಿತ ನಡೆಯುತ್ತಿದೆ-ಮಾಜಿ ಸಿಎಂ H.D ಕುಮಾರಸ್ವಾಮಿ

ದಲ್ಲಾಳಿಗಳಿಂದ ಆಡಳಿತ ನಡೆಯುತ್ತಿದೆ-ಮಾಜಿ ಸಿಎಂ H.D ಕುಮಾರಸ್ವಾಮಿ
ಬೀದರ್ , ಭಾನುವಾರ, 8 ಜನವರಿ 2023 (20:31 IST)
ಎರಡನೇ ಹಂತದಲ್ಲಿ ಜೆಡಿಎಸ್​​​​​ ಪಂಚರತ್ನ ರಥಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರವಾಸಕ್ಕೆ ಉತ್ತಮ ವಾತಾವರಣವಿದೆ ಎಂದು ಮಾಜಿ ಸಿಎಂ H.D ಕುಮಾರಸ್ವಾಮಿ ಹೇಳಿದ್ದಾರೆ. ಬೀದರ್​​ನಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರು ತಮ್ಮ-ತಮ್ಮ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಮನಬಿಚ್ಚಿ ಹೇಳುತ್ತಿದ್ದಾರೆ. ಭಾರತದ ನಿಜವಾದ ಚಿತ್ರಣದ ಬಗ್ಗೆ ಯಾವ ರಾಜಕೀಯ ಪಕ್ಷಗಳು ಮಾತನಾಡುತ್ತಿಲ್ಲ. ಈ ಕೆಲಸವನ್ನು JDS ಮಾಡುತ್ತಿದೆ ಎಂದು ಹೇಳಿದರು. ಸ್ಯಾಂಟ್ರೋ ರವಿ ಬಗ್ಗೆ ಯಾರು ಮಾತನಾಡಬೇಡಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಹೆಚ್​​ಡಿಕೆ ತಿರುಗೇಟು ನೀಡಿದರು. ವರ್ಗಾವಣೆ ಬಗ್ಗೆ ಸ್ಯಾಂಟ್ರೋ ರವಿ S.T ಸೋಮಶೇಖರ್ ಜೊತೆ ಮಾತನಾಡಿದ ವಿಡಿಯೋ ಹೊರಗೆ ಬಂದಿದೆ. ಸರ್ಕಾರದ ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಆಟ ನಿಮಗೆ ತಿರುಗೇಟು ಆಗುತ್ತೆ- ಪ್ರಮೋದ್​​ ಮುತಾಲಿಕ್​​​​