Publish Date: Sat, 12 Mar 2022 (17:12 IST)
Updated Date: Sat, 12 Mar 2022 (17:55 IST)
ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ಆರಂಭವಾಗಿಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ಅಂತ ಗುರುತಿಸಿದ್ರು ಪರೀಕ್ಷೆ ಬರೆಯಲು ಅವಕಾಶ ನೀಡದ ಆಡಳಿತ ಮಂಡಳಿ, ಗೀತಂ ಯೂನಿವರ್ಸಿಟಿ ವಿರುದ್ಧ ನೂರಾರು ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ.
ತಾಂತ್ರಿಕ ಕಾರಣ ಹೇಳಿ ಖಾದಿ ಬೋರ್ಡ್ ಪರೀಕ್ಷೆ(Khadi board exams) ಬರೆಯಲು ವಿದ್ಯಾರ್ಥಿಗಳಿಗೆ(Students) ನಿರಾಕರಿಸಲಾಗಿದೆ. ಹೀಗಾಗಿ ಪರೀಕ್ಷೆ(Exam) ಬರೆಯಲು ಅವಕಾಶ ನೀಡದ ಎಕ್ಸ್ ಸೆಂಟರ್ ಸಿಬ್ಬಂದಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು (ಮಾರ್ಚ್ 12) ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ಆರಂಭವಾಗಿಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ಅಂತ ಗುರುತಿಸಿದ್ರು ಪರೀಕ್ಷೆ ಬರೆಯಲು ಅವಕಾಶ ನೀಡದ ಆಡಳಿತ ಮಂಡಳಿ, ಗೀತಂ ಯೂನಿವರ್ಸಿಟಿ ವಿರುದ್ಧ ನೂರಾರು ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ.
ಸಾವಿರಾರು ಕನಸ್ಸು ಕಟ್ಟಿಕೊಂಡು ಬಂದಿದ್ದು, ಪರೀಕ್ಷೆ ಬರೆಯಲು ಕೊಡುತ್ತಿಲ್ಲ. ತಮಗೆ ನ್ಯಾಯ ಕೊಡಿಸುವಂತೆ ಕಾಲೇಜು ಮುಂದೆ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ